ಕೆರೆ ಕೋಡಿ ಬಿದ್ದ ನೀರಲ್ಲಿ ಕೈ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋದ ಯುವಕರು

 

ತುಮಕೂರು:Tumku ಈ ಬಾರಿ ಹೆಚ್ಚು ಮಳೆ ಸುರಿಯುತ್ತಿದ್ದು  ಎಲ್ಲಾ ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ .‌ಆದರೆ ಇಲ್ಲಿ  ಇಬ್ಬರು ಯುವಕರು  ಕೋಡಿಯಲ್ಲಿ ಕಾಲು ತೊಳೆಯಲು ಹೋಗಿ ನೀರಿನ ರಭಸಕ್ಕೆ  ಕೊಚ್ಚಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಕೆರೆಯಲ್ಲಿ ಸಂಭವಿಸಿದೆ.gubbi

ಕೆರೆ ಕೋಡಿಯಲ್ಲಿ ಕೊಚ್ಚಿಹೋದ ಇಬ್ಬರನ್ನು ಹನುಮಂತರಾಜು ಮತ್ತು ನಟರಾಜು ಎಂದು ಗುರುತಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋದವರನ್ನು ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ.tumkur

ಅಗ್ನಿಶಾಮಕ ದಳದ ಸಿಬ್ಬಂದಿ ಕೊಚ್ಚಿ ಹೋದವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಶಾಸಕ ಮಸಾಲ ಜಯರಾಮ್ ಶವ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು  ಎಂಬ ಆದೇಶ ನೀಡಿದ್ದಾರೆ.(The youth who drowned in Kere Kodi)

ಶವಗಳ ಪತ್ತೆಗೆ ಅಗತ್ಯ ಸಲಕರಣೆ ಬಳಸಲು ಅಗ್ನಿಶಾಮ ದಳದ ಸಿಬ್ಬಂದಿಗೆ ತಿಳಿಸಿದ್ದೇನೆ. ಡ್ರೋಣ್ ಕ್ಯಾಮೆರ ಬಳಸಿ ಶವ ಪತ್ತೆಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours