ವಾಜಪೇಯಿ ಅವರ ಕೊಡುಗೆ ದೇಶಕ್ಕೆ ಅಪಾರ

 

ಹಿರಿಯೂರು: ನಗರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಕಾರ್ಯಾಲಯದಲ್ಲಿ ಇಂದು ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ದೇಶದ ಅಭಿವೃದ್ಧಿಗೆ ವಾಜಪೇಯಿ ಕೊಡುಗೆ ಅಪಾರವಾಗಿದೆ.ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಮತ್ತು ಅವರು ಭವಿಷ್ಯದ ಹೆಚ್ಚು ಯೋಚನೆ ಹೊಂದಿದ್ದರು.ಅವರು ಒಬ್ಬ ಮಾದರಿ ರಾಜಕಾರಣಿ ಎಂದು ತಿಳಿಸಿದರು. ಆದರ್ಶ ಜೀವನ ಕುರಿತು ಬಿಜೆಪಿ ಮುಖಂಡ ಎಂ.ಎಸ್. ರಾಘವೇಂದ್ರ ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಂವಿ ಹರ್ಷ, ಮಾಜಿ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ನಗರಸಭೆ ಸದಸ್ಯರಾದ ಪಲ್ಲವ, ಬಾಲಕೃಷ್ಣ, ಮುಖಂಡರಾದ ಹರೀಶ್, ಉಮೇಶ್, ಟಿಪಿಎಂಎಸ್ ಸದಸ್ಯ ಪಿ ಕರಿಯಣ್ಣ, ನಟರಾಜ್, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಶೋಭಾ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶಾಫೀರ್, ವೆಂಕಟೇಶ್, ಕೃಷ್ಣಮೂರ್ತಿ, ಕೆಪಿ ಶ್ರೀನಿವಾಸ್, ನವೀನ್, ಬಿಎನ್. ತಿಪ್ಪೇಸ್ವಾಮಿ, ಓಂಕಾರ್, ರಾಘವೇಂದ್ರ, ಸಂದೀಪ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours