ತೇರುಮಲ್ಲೇಶ್ವರ ಮುಕ್ತಿ ಬಾವುಟ ಪಡೆದ ಡಿ.ಸುಧಾಕರ್ ,ಎಷ್ಟು ಲಕ್ಷಕ್ಕೆ?

 

ಹಿರಿಯೂರು: ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ಹಿರಿಯೂರು ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಮಧ್ಯಾಹ್ನ 1.45ಕ್ಕೆ ಸಾವಿರಾರು ಭಕ್ತರ ಭಕ್ತಿ–ಸಂಭ್ರಮದ ನಡುವೆ ಯಶಸ್ವಿಯಾಗಿ ನೆರವೇರಿತು.
ಬ್ರಹ್ಮರಥೋತ್ಸವಕ್ಕೆ ಮೊದಲು ಹರಾಜಾದ ಮುಕ್ತಿ ಬಾವುಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ₹ 18 ಲಕ್ಷಕ್ಕೆ ಪಡೆದುಕೊಂಡರು. ಸುಧಾಕರ್‌ ಅವರು ತೇರುಮಲ್ಲೇಶ್ವರ ದೇವರಿಗೆ ಕೈ ಮುಗಿದು ಬೆಂಬಲಿಗರೊಂದಿಗೆ ಮುಕ್ತಿ ಬಾವುಟ ಹಿಡಿದಾಗ ಭಕ್ತರಿಂದ ಚಪ್ಪಾಳೆ, ಜೈಕಾರ ಕೇಳಿಬಂದಿತು. ಹಿಂದಿನ ವರ್ಷವೂ ಸುಧಾಕರ್ ಅವರೇ ₹ 10 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದಿದ್ದರು.
[t4b-ticker]

You May Also Like

More From Author

+ There are no comments

Add yours