ಬಡ ಜನತೆ ಹಸಿವು ಮುಕ್ತರಾಗಲಿ : ನಗರಸಭೆ ಸದಸ್ಯ ಜಗದೀಶ್

 


ಹಿರಿಯೂರು:ಮೇ.24-ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಬಡಜನತೆ ಹಸಿವು ಮುಕ್ತರಾಗಬೇಕು ಎಂಬ ಉದ್ದೇಶದಿಂದ ನಗರದ ನಿರಾಶ್ರಿತ ರಿಗೆ ಹಾಗು ಕೂಲಿ‌ಕಾರ್ಮಿಕರು ಮತ್ತು ಕೊರೋನ ವಾರಿಯರ್ಸ್ ರವರಿಗೆ‌ ಆಹಾರದ ಸಮಸ್ಯೆ ಆಗಬಾರದು ಎಂದು ಕಳೆದ ಮೇ 16ರಿಂದ ನಮ್ಮ ಸ್ನೇಹಿತರೊಂದಿಗೆ ಊಟದ ವ್ಯವಸ್ಥೆ ಮಾಡಿ ಪೊಟ್ಟಣಗಳ ಮೂಲಕ ವಿತರಿಸುತ್ತಿದ್ಧೇವೆ ಎಂದು 15 ನೇ ವಾರ್ಡ್ ನ ‌ನಗರಸಭೆ ಸದಸ್ಯ ಜಗದೀಶ್ ಹೇಳಿದರು. ಸೋಮವಾರದ ಆಹಾರ ವಿತರಣೆ ಸಂದರ್ಭದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ.ಸುಧಾಕರ್ ಅಭಿಮಾನಿ ಬಳಗದ ಸದಸ್ಯರು ಮತ್ತು ಧನರಾಜ್,ಮುದಿ ಗೌಡ್ರು,ಜಗದೀಶ್,ಮಾರುತಿ,ಶಂಕರಭಾಗವತ್,ರವಿಕಿರಣ್,ರವಿಚಂದ್ರಗೌಡಾ.ರಾಜಶೇಖರ್,ಶ್ರೀನಿವಾಸ್,ಹರ್ಷವರ್ಧನ್,ಕಾರ್ತಿಕ್,ಹರೀಶ್,ಬಾಲಣ್ಣ,ಸಾದತ್ ಉಪಸ್ಥಿತರಿದ್ದರು. ಎಂ ರವೀಂದ್ರನಾಥ್ ಹಿರಿಯೂರು

[t4b-ticker]

You May Also Like

More From Author

+ There are no comments

Add yours