ಹೊಟ್ಟೆನೋವು ತಾಳದೆ ನೇಣು ಹಾಕಿಕೊಂಡ ರೈತ : ಬೈಕ್ ಪಲ್ಟಿ ವ್ಯಕ್ತಿ ಸಾವು.
ಚಳ್ಳಕೆರೆ-೧೦ ತಾಲ್ಲೂಕಿನ ನನ್ನಿವಾಳ ಗ್ರಾಮದ ಗುಡ್ಡದ ಬಳಿ ಪೆತ್ತಮಾರನಹಟ್ಟಿ ಗ್ರಾಮದ ರೈತ ಅಪ್ಪಣ್ಣ(೪೦) ಹೊಟ್ಟೆನೋವು ತಾಳಲಾರದೆ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಮೃತನ ಸಹೋದರ ಜಯಣ್ಣ ಪೊಲೀಸರಿಗೆ ದೂರು ನೀಡಿ ನನ್ನ ತಮ್ಮನಿಗೆ ಕಳೆದ ಹಲವಾರು ತಿಂಗಳುಗಳಿಂದ ಹೊಟ್ಟೆನೋವು ಬರುತ್ತಿದ್ದು ಹಲವಾರು ಆಸ್ಪತ್ರೆಗಳಿಗೆ ತೋರಿಸಿದರೂ ವಾಸಿವಾಗಿರುವುದಿಲ್ಲ. ಇದರಿಂದ ಬೇಸತ್ತು ನೇಣು ಹಾಕಿಕೊಂಡಿದ್ದಾನೆಂದು ತಿಳಿಸಲಾಗಿದೆ.
ಬೈಕ್ ಪಲ್ಟಿ ವ್ಯಕ್ತಿ ಸಾವು : ಮತ್ತೊಂದು ಪ್ರಕರಣದಲ್ಲಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಜೋಗಿಹಳ್ಳಿ ಗ್ರಾಮದ ವಾಸುದೇವರೆಡ್ಡಿ ಎಂಬುವವರ ಜಮೀನಿನ ಬಳಿ ಬುಧವಾರ ರಾತ್ರಿ ಬೈಕ್ ಪಲ್ಟಿಯಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಅದೇ ಗ್ರಾಮದ ಚಂದ್ರಶೇಖರ(೪೩) ಎಂಬ ವ್ಯಕ್ತಿ ಮೃತಪಟ್ಟಿರುತ್ತಾನೆ. ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ, ಠಾಣಾ ಇನ್ಸ್ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್ಐ ಕೆ.ಸತೀಶ್ನಾಯ್ಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
————————————————–
+ There are no comments
Add yours