ಕೋಲಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂ.ಎಲ್.ಸಿ ಎನ್. ರವಿಕುಮಾರ್ ಕಾರು, ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರದ ಲಕ್ಷ್ಮೀಸಾಗರ ಗೇಟ್ ಬಳಿ ನಡೆದಿದೆ.
ಎಂ ಎಲ್ ಸಿ ರವಿಕುಮಾರ್ ಅವರ ಕಾರು ಡಿಕ್ಕಿಯಾಗಿ ಬೈಕ್ ಸವಾರ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ರವಿಕುಮಾರ್ ಹಿಂದೇಟು ಹಾಕಿದ್ದಾರೆ.
ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು, ನೀನ್ಯಾವ ಸೀಮೆ ಎಂ ಎಲ್ ಸಿ ? ಬೈಕ್ ಸವಾರ ಗಾಯಗೊಂಡರೂ ಆಸ್ಪತ್ರೆಗೆ ಕರೆದೊಯ್ಯಲು ಯೋಚಿಸುತ್ತಿದ್ದೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಜನರ ಆಕ್ರೋಶ ಕಂಡು ಎಂ.ಎಲ್.ಸಿ ರವಿಕುಮಾರ್ ದಂಗಾಗಿದ್ದಾರೆ. ರವಿಕುಮಾರ್ ಕಾರು ಡಿಕ್ಕಿಯಾಗಿ ಶಿವನಪುರದ ಗೋಪಾಲ್ (45) ಗಂಭೀರವಾಗಿ ಗಾಯಗೊಂಡಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ತಾವೇ ಗಾಯಾಳುವನ್ನು ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
[t4b-ticker]
+ There are no comments
Add yours