ಹಿಂದೂ ಧರ್ಮದ ಆರ್ಚಕ ಮುಸ್ಲಿಂ ಸಮುದಾಯಕ್ಕೆ ಮತಾಂತರದ 24 ಗಂಟೆಯಲ್ಲಿ ವಾಪಸ್ !

 

ತುಮಕೂರು: ಹಿಂದೂ ಧರ್ಮದ ಅರ್ಚಕ ಒಬ್ಬರು  ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದಾನೆ. ಆದರೆ ಮತಾಂತರಗೊಂಡ ಕೇವಲ 24 ಗಂಟೆಯಲ್ಲಿ ವಾಪಸ್ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾನೆ.

ಚಂದ್ರಶೇಖರಯ್ಯ ಎಂಬ ವ್ಯಕ್ತಿ  ವೃತ್ತಿಯಲ್ಲಿ ಅರ್ಚಕ. ತುಮಕೂರು ತಾಲೂಕಿನ ಹಿರೇಹಳ್ಳಿಯ   ಓಂಕಾರೇಶ್ವರದ ಅರ್ಚಕ ದಿ.ರೇಣುಕಾರಾಧ್ಯರ ಪುತ್ರನಾದ ಈತ ದಿಢೀರ್ ಬೆಳವಣಿಗೆಯಲ್ಲಿ  ಹಿಂದೂ ಧರ್ಮ ತ್ಯಜಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದನು.

ಅದು ಸಹ ಪತ್ರಿಕಾ ಪ್ರಕಟಣೆ ನೀಡುವ ಮೂಲಕ. ಆಗಸ್ಟ್ 18 ರಂದು ಮತಾಂತರಗೊಂಡಿದ್ದ ಈತನ ಬಗ್ಗೆ ರಾಜ್ಯಾದ್ಯಂತ  ವ್ಯಾಪಕ ಚರ್ಚೆ ವ್ಯಕ್ತವಾಗಿತ್ತು.

ಇನ್ನು ಇದರ ಬೆನ್ನಲ್ಲೇ ತುಮಕೂರು ಜಿಲ್ಲೆಯ  ಬಿಜೆಪಿ ಪಕ್ಷದ  ಮಾಜಿ ಸಚಿವ ಸೊಗಡು ಶಿವಣ್ಣ ಚಂದ್ರಶೇಖರಯ್ಯ ಅವರನ್ನು ಭೇಟಿ ಮಾಡಿ, ಮತಾಂತರದ ಬಗ್ಗೆ ಮಾತುಕತೆ ನಡೆಸಿದ್ದರು. ಆ ಬಳಿಕ ಆತ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾನೆ.

ಚಂದ್ರಶೇಖರಯ್ಯ ಮತಾಂತರಗೊಂಡು ಮುಬಾರಕ್ ಪಾಷ ಆಗಿದ್ದ. ಚಂದ್ರಶೇಖರಯ್ಯ ಮುಬಾರಕ್ ಪಾಷ ಆಗಲು ಪ್ರಮುಖ ಕಾರಣ ಕೌಟುಂಬಿಕ ಕಲಹ. ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದಿಂದ ಇವ್ರು ಮಾನಸಿಕವಾಗಿ ನೊಂದಿದ್ದರು. ಅಲ್ಲದೆ ಕಷ್ಟಕಾಲದಲ್ಲಿ ಯಾರೂ ಸಹಾಯಕ್ಕೆ ಬರೋದಿಲ್ಲ ಅಂತಾ ಕೊರಗುತಿದ್ದರು. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯೊಂದಲು ಮತಾಂತರ ಒಂದೇ ದಾರಿ ಎಂದು ತೀರ್ಮಾನಿಸಿ ಅನ್ಯ ಧರ್ಮವನ್ನು ಸ್ವೀಕರಿಸಿದರು.

[t4b-ticker]

You May Also Like

More From Author

+ There are no comments

Add yours