ಎಲ್ಲಾ ಲಾರಿ ಮಾಲೀಕರು ಸಂಘಟಿತರಾಗಿ ಸಂಘ ಬೆಳೆಸಿ:ಶಾಸಕ ಟಿ.ರಘುಮೂರ್ತಿ

 

 

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಹಾಗೂ ವರ್ತಕರ ಸರಕುಗಳನ್ನು ಸಾಗಾಟ ಮಾಡುವ ಮೂಲಕ ಚಳ್ಳಕೆರೆ ಲಾರಿ ಮಾಲೀಕರ ಸಂಘ ಉತ್ತಮ ಬಾಂಧವ್ಯವನ್ನು ಹೊಂದಿದೆ. ಇದೇ ಮೊದಲ ಬಾರಿಗೆ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಮೂಲಕ ಎಲ್ಲಾ ಲಾರಿ ಮಾಲೀಕರು ಸಂಘಟಿತರಾಗಿ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.

ಇದನ್ನು ಓದಿ: ಅಕ್ಟೋಬರ್ 13 ರಂದು ಡಿಜೆ ಮೆರವಣಿಗೆಯೊಂದಿಗೆ ಮದಕರಿ ಉತ್ಸವ:ಬಿ.ಕಾಂತರಾಜ್

ಅವರು, ಶುಕ್ರವಾರ ಬೆಂಗಳೂರು ರಸ್ತೆಯಲ್ಲಿ ನೂತನವಾಗಿ ಚಳ್ಳಕೆರೆ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಚಳ್ಳಕೆರೆ ನಗರವೂ ಸೇರಿದಂತೆ ರಾಜ್ಯ ಹಾಗೂ ಅಂತರಾಜ್ಯಕ್ಕೆ ಸರಕು ಸಾಮಾಗ್ರಿಗಳನ್ನು ಪ್ರಾಮಾಣಿಕತೆಯಿಂದ ಸಾಗಾಟ ಮಾಡಿ ವರ್ತಕರ ವಿಶ್ವಾಸವನ್ನು ಗಳಿಸಿದ್ದೀರಿ, ನಿಮ್ಮ ಎಲ್ಲಾ ಚಟುವಟಿಕೆಗಳಿಗೆ ನಾನು ಸದಾ ಬೆಂಬಲವಾಗಿರುತ್ತೇನೆ ಎಂದರು

ಸಂಘದ ಅಧ್ಯಕ್ಷ ಡಿ.ಭರಮಣ್ಣ, ಉಪಾಧ್ಯಕ್ಷ ಬಂಡಯ್ಯ, ಪದಾಧಿಕಾರಿಗಳಾದ ಜಗದೀಶ್, ಗಿರೀಶ್, ಜಯರಾಂ, ಇಬ್ರಾಹಿಂ, ಅಭಿಷೇಕ್, ಮಹಮ್ಮದ್ ಕಲೀಲ್‌ಸಾಬ್ ಮುಂತಾದವರು ಭಾಗವಹಿಸಿದ್ದರು.

ಇದನ್ನುಓದಿ: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾ‌ನ

[t4b-ticker]

You May Also Like

More From Author

+ There are no comments

Add yours