ಚಿತ್ರದುರ್ಗ: ಚಿತ್ರದರ್ಗದಲ್ಲಿ ಅದ್ದೂರಿಯಾಗಿ ಮದಕರಿನಾಯಕ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 13 ರಂದು ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.
ಚಿತ್ರದುರ್ಗವನ್ನು ಆಳ್ವಿಕರ ಮಾಡಿರುವ ಮದಕರಿನಾಯಕನನ್ನು ನಾವೆಲ್ಲರೂ ಜಾತ್ಯತೀತವಾಗಿ ಮಾಡಲಾಗುತ್ತದೆ. ಎಲ್ಲಾ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು. ಮದಕರಿನಾಯಕನ ಸ್ಮರಣೆಯನ್ನು ವರ್ಷಕ್ಕೆ ಎರಡು ಬಾರಿ ಮಾಡಲಾಗುತ್ತದೆ. ಮೇ 15 ರಂದು ಮದಕರಿನಾಯಕ ಸ್ಮರಣೆ ಮತ್ತು ಅಕ್ಟೋಬರ್ 13 ರಂದು ಮದಕರಿನಾಯಕ ಜಯಂತ್ಯೋತ್ಸವ ಮಾಡಲಾಗುತ್ತದೆ. ಎರಡ್ಮೂರು ದಿನದಲ್ಲಿ ಮದಕರಿನಾಯಕ ನೂತನ ಭಾವಚಿತ್ರ ಬಳಸಲಾಗುತ್ತದೆ. ಡಿಜೆ ಮೆರವಣಿಗೆಯೊಂದಿಗೆ ಅದ್ದೂರಿವಾಗಿ ವಾಲ್ಮೀಕಿ ಜಯಂತಿಗಿಂತ ಎರಡು ಪಟ್ಟು ಜನರನ್ನು ಸೇರಿಸಿ ಐತಿಹಾಸಿಕ ಪುಟ ಸೇರುವಂತೆ ಮಾಡುತ್ತೇವೆ ಎಂದರು.
ಜಿಲ್ಲಾ ಅಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ಮಾತನಾಡಿ ಕಾರ್ಯಕ್ರಮದ ಪೂರ್ಣ ವಿವರವನ್ನು ಒಂದೆರಡು ದಿನದಲ್ಲಿ ತಿಳಿಸುತ್ತೇನೆ. ಮದಕರಿನಾಯಕ ಜಯಂತಿಗೆ ಯಾರು ರಾಜ್ಯದಿಂದ ಆಗಮಿಸುತ್ತಾರೆ ಎಂಬುದನ್ನು ತಿಳಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ದೀಪಕ್, ಕಾಟೀಹಳ್ಳಿ ಕರಿಯಪ್ಪ, ಗೋಪಲಸ್ವಾಮಿ ನಾಯಕ, ಸೋಮೇಂದ್ರ ಇದ್ದರು.
+ There are no comments
Add yours