ರೈಲು ವಿಳಂಬದಿಂದ ಪಿಡಬ್ಲುಡಿ ಸಹಾಯಕ ಎಂಜಿನಿಯರ್ ಪರೀಕ್ಷೆ ಮಿಸ್ ಮಾಡಿಕೊಂಡವರಿಗೆ ಮತ್ತೆ ಕೆಪಿಎಸ್ ಸಿ ಸಿಹಿ ಸುದ್ದಿ

 

ರೈಲು ವಿಳಂಬದಿಂದಾಗಿ ಪಿಡಬ್ಲುಡಿ ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಿಂದ ವಂಚಿತರಾದವರಿಗೆ ಕೆಪಿಎಸ್ ಸಿ ಸಿಹಿಸುದ್ದಿ ನೀಡಿದ್ದು, ಡಿಸೆಂಬರ್ 29 ಕ್ಕೆ ಮರು ಪರೀಕ್ಷೆಗೆಅವಕಾಶ ನೀಡಿದೆ.

ರೈಲು ವಿಳಂಬದಿಂದ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ಡಿಸೆಂಬರ್ 29 ರಂದು ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ತೀರ್ಮಾನಿಸಿದೆ.

ಹೀಗಾಗಿ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು ಹಾಸನ-ಸೊಲ್ಲಾಪುರ ಎಕ್ಸ್ ಪ್ರೆಸ್, ಉದ್ಯಾನ್ ರೈಲಿನಲ್ಲಿ ಪ್ರಯಾಣ ನಡೆಸಿರುವುದಕ್ಕೆ ಸಂಬಂಧಿಸಿದ ಟಿಕೆಟ್ ಪ್ರತಿ ಮತ್ತು ಆಯೋಗದಿಂದ ಪಡೆದುಕೊಂಡಿರುವ ಪ್ರವೇಶ ಪತ್ರವನ್ನು ಡಿಸೆಂಬರ್ 22 ರೊಳಗೆ ಸ್ಪೀಡ್ ಪೋಸ್ಟ್ ಮೂಲಕ ಕೆಪಿಎಸ್ ಸಿ ಕಚೇರಿಗೆ ಕಳುಹಿಸಬೇಕು. ಅಥವಾ ಇ-ಮೇಯರ್ kpsc.ka@nic.in ಗೆ ಮೇಲ್ ಮಾಡಬಹುದು.

ಡಿಸೆಂಬರ್ 14 ರಂದು ರೈಲು ವಿಳಂಬದಿಂದ ಪರೀಕ್ಷೆಯ ಬೆಳಗಿನ ಸಾಮಾನ್ಯ ಪತ್ರಿಕೆ-1 ನ್ನು ವಂಚಿತರಾದವರಿಗೆ ಮಾತ್ರ ಡಿಸೆಂಬರ್ 29 ರಂದು ಮರು ಪರೀಕ್ಷೆ ನಡೆಸಲಾಗುತ್ತದೆ ಎಂದು ಕೆಪಿಎಸ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.

 

[t4b-ticker]

You May Also Like

More From Author

+ There are no comments

Add yours