ವಿಶೇಷ ವರದಿ:
ರಾಜ್ಯ ರಾಜಕಾರಣದಲ್ಲಿ ಎಲ್ಲ ರಾಜಕೀಯ ಲೆಕ್ಕಚಾರ ತಲೆಕೆಳಗಾಗಿವೆ. ಅದೇ ರೀತಿಯಲ್ಲಿ ಮತಬ್ಯಾಂಕ್ ರಾಜಕಾರಣದಲ್ಲಿ ಇಂದು ದೊಡ್ಡ ಮೋಸವಾಗಿದೆ. ರಾಜ್ಯ ರಾಜಕಾರಣದಲ್ಲಿ ನಾಯಕ ಸಮಾಜದ ಪ್ರಶ್ನಾತೀತ ನಾಯಕ ಯಾರಾದರೂ ಇದ್ದರೆ ಅದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸಚಿವ ಬಿ.ಶ್ರೀರಾಮುಲು ಮಾತ್ರ. ಕಳೆದ ವಿಧಾನ ಸಭಾ ಚುನಾವಣಾ ವೇಳೆಯಲ್ಲಿ ರಾಮುಲು ಅವರನ್ನು ಡಿಸಿಎಂ ಮಾಡುತ್ತೇವೆ ಎಂಬ ಮಾತನ್ನು ಹಾಡಿ ರಾಜ್ಯಾದ್ಯಂತ ನಾಯಕ ಸಮಾಜದ ಮತವನ್ನು ಹಿಡಿಯಾಗಿ ಪಡೆದು 104 ಸ್ಥಾನದ ಗೆಲುವಿನಲ್ಲಿ ಸಚಿವ ಶ್ರೀರಾಮುಲು ಪಾತ್ರ ದೊಡ್ಡದಿದೆ. ಆದರೆ ಇಂದು ನಡೆದ ಸಚಿವ ಸಂಪುಟ ವೇಳೆಯಲ್ಲಿ ಡಿಸಿಎಂ ಮಾಡುವ ನಿರೀಕ್ಷೆ ಇಡೀ ನಾಯಕ ಸಮಾಜಕ್ಕೆ ಇತ್ತು. ಸಂಭ್ರದಮ ಸಿದ್ದತೆಯಲ್ಲಿರುವ ಸಮಾಜಕ್ಕೆ ಇಂದು ಡಿಸಿಎಂ ಸ್ಥಾನ ನೀಡದೇ ಕುಂಟು ನೆಪ ಹೇಳಿ ಡಿಸಿಎಂ ಸ್ಥಾನ ಇಲ್ಲದಂತಾಗಿದೆ. ಶ್ರೀರಾಮುಲು ಅವರು ಸಹ ಸರಳ ಸಜ್ಜನಿಕೆಯ ಮತ್ತು ಪಕ್ಷ ನಿಷ್ಠೆ ಇಂದು ಬಿಜೆಪಿ ಪಕ್ಷ ಅವರನ್ನು ನಡೆಸಿಕೊಂಡ ರೀತಿಗೆ ನಾಯಕ ಜನಾಂಗಕ್ಕೆ ಮಾಡಿದ ಅವಮಾನ ಎಂದು ಬಾವಿಸಬಹುದು. ಬಿಜೆಪಿಯಲ್ಲಿ ನಾಯಕ ಸಮಾಜಕ್ಕೆ ಬೆಲೆ ಇಲ್ಲ ಎಂಬುದನ್ನು ಮತ್ತೊಮ್ಮೆ ರಾಮುಲು ವಿಚಾರದಲ್ಲಿ ಸಾಬೀತುಪಡಿಸಿ ಡಿಸಿಎಂ ಸ್ಥಾನ ನೀಡದೆ ಕೇವಲ ಸಚಿವ ಸ್ಥಾನ ಮಾಡಿ ಕಣ್ಣೊರಿಸುವ ತಂತ್ರಕ್ಕೆ ಬಿಜೆಪಿ ಮುಂದಿನ ದಿನದಲ್ಲಿ ತಕ್ಕ ಶಾಸ್ತಿ ಮಾಡುವ ಶಕ್ತಿ ಏನು ಎಂಬುದನ್ನು ತೋರಿಸಿದರೆ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ.
[t4b-ticker]
+ There are no comments
Add yours