ಜನಸಾಗರದಲ್ಲಿ ಸಂಭ್ರಮದಿಂದ ಜರುಗಿದ ಅಕ್ಕ-ತಂಗಿ ಭೇಟಿ ಉತ್ಸವ

 

ಚಿತ್ರದುರ್ಗ:ಅಕ್ಕ ತಂಗಿಯರ ಐತಿಹಾಸಿಕ  ಭೇಟಿ ಉತ್ಸವ ಮಂಗಳವಾರ ನಗರದ ರಾಜಬೀದಿ ದೊಡ್ಡಪೇಟೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಜಾನಪದ ಸೊಗಡಿನ ಈ ಭೇಟಿ ಉತ್ಸವ, ಪ್ರತಿವರ್ಷ ಶ್ರೀ ಏಕನಾಥೇಶ್ವರಿ ಅಮ್ಮನವರ ಉತ್ಸವದ ನಂತರ ಮೊದಲ ಮಂಗಳವಾರ ನಡೆಯುವುದು ವಾಡಿಕೆ.

ಅದರಂತೆ ನಗರ ದೇವತೆಗಳಾದ ಬರಗೇರಮ್ಮ ಮತ್ತು ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ನಾನಾ ಪುಷ್ಪಗಳಿಂದ ಅಲಂಕೃತಗೊಂಡು ಕಹಳೆ ನಾದ, ಉರುಮೆ ನಾದ, ಡೊಳ್ಳು ಕುಣಿತ, ಸೋಮನ ಕುಣಿತ, ಚಾಮರ ಜಾನಪದ ವಾದ್ಯಗಳೊಂದಿಗೆ ಭೇಟಿ ನಡೆಯಿತು.

ಈ ಐತಿಹಾಸಿಕ ಭೇಟಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಪುತ್ರ ಡಾ. ಸಿದ್ದಾರ್ಥ , ಮಾಜಿ ಶಾಸಕ ಎಸ್.ಕೆ.ಬಸವರಾಜನ್ , ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಡಿಸಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಪರಶುರಾಮ್ , ನಗರಸಭೆ ಆಯುಕ್ತ ಹನುಮಂತರಾಜು ಇದ್ದರು.

[t4b-ticker]

You May Also Like

More From Author

+ There are no comments

Add yours