ಇಂದಿನ ರಾಶಿ ಭವಿಷ್ಯ ಯಾವ ರಾಶಿಗೆ ಹೇಗಿದೆ ಫಲ

 

ಇಂದಿನ ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ

ಮೇಷ ರಾಶಿಯವರು ಈ ದಿನಪೂರ್ತಿ ಧನಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ ಎಂದು ಗಣೇಶ ಹೇಳುತ್ತಾರೆ. ಇಂದು ನೀವು ಸಂಪೂರ್ಣವಾಗಿ ಹೊಣೆಗಾರಿಕೆಯಿಂದ ಕೂಡಿರುತ್ತೀರಿ ಮತ್ತು ನಿಮ್ಮ ಕೆಲಸಗಳನ್ನು ಪೂರ್ತಿ ಉತ್ಸಾಹದಿಂದ ಮುಂದುವರಿಸುತ್ತೀರಿ. ಲಕ್ಷ್ಮೀದೇವಿಯು ನಿಮ್ಮ ಮೇಲೆ ಅನುಗ್ರಹ ನೀಡಲಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಮನೆಯ ವಾತಾವರಣದಲ್ಲಿ ಕಳೆದ ಸಮಯವು ನಿಮ್ಮನ್ನು ಸಂಪೂರ್ಣವಾಗಿ ಉಲ್ಲಾಸಗೊಳಿಸುತ್ತದೆ. ಸಾಮಾಜಿಕ ಸ್ನೇಹಕೂಟ ಅಥವಾ ಸಂಧ್ಯಾ ವಿನೋದವು ನಡೆಯಲಿದೆ. ಈ ಅನುಗ್ರಹಕಪೂರಕ ಸಮಯದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ ಮತ್ತು ಈ ಕ್ಷಣಗಳನ್ನು ಸಂಪೂರ್ಣವಾಗಿ ಆನಂದಿಸಿ. ನಿಮ್ಮ ತಾಯಿಯ ಕಡೆಯಿಂದ ಶುಭ ಸುದ್ಧಿಯನ್ನು ಪಡೆಯುವಿರಿ ಎಂಬುದಾಗಿ ಗಣೇಶ ಸೂಚಿಸುತ್ತಾರೆ.

ವೃಷಭರಾಶಿ

ಜಾಗರೂಕರಾಗಿರಿ! ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನೀವು ಚಿಂತೆಯಲ್ಲಿ ತುಂಬಿರಬಹುದು. ಬಹುಷಃ ಇದು ಅನಾರೋಗ್ಯ ಅಥವಾ ದೃಷ್ಟಿಯಿಂದ ತೊಂದರೆಯಿಂದಿರಬಹುದು. ನಿಮ್ಮ ಕುಟುಂಬ ಸದಸ್ಯರಿಂದ ನೀವು ಆಕ್ರಮಣ ಪ್ರವೃತ್ತಿಯನ್ನು ಹೊಂದಬಹುದು. ಇದು ತಿಕ್ಕಾಟಕ್ಕೆ ಹಾದಿ ಮಾಡಿಕೊಡುವ ಸಾಧ್ಯತೆಯಿದೆ. ಇಂದು ಕೈಗೊಂಡ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಜಾಗರೂಕರಾಗಿರಿ ಏಕೆಂದರೆ ಇದು ನಿಮ್ಮ ಕಿಸೆಯನ್ನು ಪೂರ್ತಿ ಖಾಲಿಮಾಡಿಬಿಡಬಹುದು. ಏನೇ ಆದರೂ, ಕಠಿಣ ಪರಿಶ್ರಮವು ಇಂದು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು. ಅಪಘಾತ ಮತ್ತು ಸಣ್ಣ ಮಟ್ಟದ ಪರಾಜಯಗಳ ಸಂಭಾವ್ಯತೆಯಿರುವುದರಿಂದ ಎಚ್ಚರಿಕೆಯಿಂದಿರಿ.

ಮಿಥುನ

ಈ ದಿನವು ನಿಮಗೆ ಸಾಕಷ್ಟು ಲಾಭಗಳನ್ನು ಆಹ್ವಾನಿಸಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಅವಿವಾಹಿತರಿಗೆ ಉತ್ತಮ ಸಂಗಾತಿ ದೊರೆಯುವ ಸಾಧ್ಯತೆಯಿದೆ. ಆರ್ಥಿಕ ಲಾಭಗಳಿಗೂ ಇಂದು ಉತ್ತಮ ದಿನ. ಗೆಳೆಯರ ಭೇಟಿ ಮತ್ತು ಸಂತೋಷ ಹಂಚುವಿಕೆಯು ಈ ದಿನವನ್ನು ಫಲಭರಿತವನ್ನಾಗಿಸುತ್ತದೆ. ಈಗ, ಎಲ್ಲಾ ಉತ್ತಮ ವಿಚಾರಗಳು ಒಟ್ಟಾಗಿ ಬರಲಿವೆ. ನಿಮ್ಮ ಅಭಿವೃದ್ಧಿಯ ಬಗ್ಗೆ ನಿಮ್ಮ ಮಗ ಮತ್ತು ಪತ್ನಿಯು ಸಮರ್ಥನೆಯಲ್ಲಿ ತೊಡಗಿರುವ ಜೊತೆಗೆ ನಿಮಗೆ ಸ್ವಾದಿಷ್ಟ ಭೋಜನ ಉಪಚಾರವೂ ಸಿಗಲಿದೆ. ನಿಮ್ಮ ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.ಇಂದು ನಿಮ್ಮ ಉದ್ಯೋಗ/ವ್ಯವಹಾರದಲ್ಲಿ ಅಬಿವೃದ್ಧಿ ಮತ್ತು ಆದಾಯದಲ್ಲಿನ ವರ್ಧನೆ ಉಂಟಾಗಲಿದ್ದು, ಇಂದು ನಿಮ್ಮ ಕಿಸೆ ಭರ್ತಿಯಾಗಿರಬಹುದು. ಈ ಆಕಸ್ಮಿಕ ಸಮಯದ ಉತ್ತಮ ಪ್ರಯೋಜನ ಪಡೆದುಕೊಳ್ಳಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಇಂದು ಅವಕಾಶಗಳು ಕಾದಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ಎಲ್ಲಾ ಕಾರ್ಯಗಳು ಇಂದು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಮೇಲಾಧಿಕಾರಿಗಳೊಂದಿಗೆ ನೀವು ಅತಿ ಮುಖ್ಯ ಚರ್ಚೆಯಲ್ಲಿ ತೊಡಗಬಹುದು ಮತ್ತು ಇದರಲ್ಲಿನ ನಿಮ್ಮ ನಿರ್ವಹಣೆಯ ಬಗ್ಗೆ ಅವರು ಸಂತಸಗೊಳ್ಳಬಹುದು. ಇಂದು ನಿಮಗೆ ಬಡ್ತಿ ಸಿಗುವ ಯೋಗವಿದೆ. ಗೃಹಕ್ಷೇತ್ರದಲ್ಲಿ, ನಿಮ್ಮ ಕುಟುಂಬ ಸದಸ್ಯರೊಂದಿಗಿನ ಸಂವಾದವು ಮತ್ತು ನಿಮ್ಮ ಮನೆಯ ಸೌಂದರ್ಯ ವೃದ್ಧಿಗಾಗಿ ನೀವು ಕೈಗೊಳ್ಳುವ ಹೊಸ ಆಲಂಕಾರಿಕ ವಿಚಾರಗಳಿಂದ ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ಇಂದು ನೀವು ಕಚೇರಿ ನಿಮಿತ್ತ ಪ್ರವಾಸ ತೆರಳುವಿರಿ. ನಿಮ್ಮ ಆರೋಗ್ಯ, ಮತ್ತು ತಾಯಿಯೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಧನಾತ್ಮಕ ಸುದ್ದಿಗಳು ಬರಲಿವೆ. ಸರಕಾರಿ ಸಂಬಂಧಿ ಕಾರ್ಯಗಳಿಂದ ಪ್ರಯೋಜನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ..

ಸಿಂಹ ರಾಶಿ

ಈ ದಿನ ನೀವು ಎಚ್ಚರ ಹಾಗೂ ಜಾಗರೂಕರಾಗಿರಬೇಕು ಎಂಬುದಾಗಿ ಗಣೇಶ ಒತ್ತಾಯಿಸುತ್ತಾರೆ. ಗ್ರಹಗತಿಗಳು ನಿಮ್ಮ ಪರವಾಗಿ ಪರಿಹಾರ ನೀಡಲಿಕ್ಕಿಲ್ಲ. ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ. ಔಷಧಿ, ವೈದ್ಯರ ಶುಲ್ಕ ಮುಂತಾದವುಗಳು ನಿಮ್ಮ ವೆಚ್ಚಕ್ಕೆ ಕೂಡಲಿವೆ. ತಾಳ್ಮೆಯಿಂದಿರಿ ಮತ್ತು ಮನೆಮಂದಿಯನ್ನು ಅರ್ಥ ಮಾಡಿಕೊಳ್ಳಿ. ಪ್ರಶ್ನಾತ್ಮಕ ಮತ್ತು ರಹಸ್ಯದ ಕೆಲಸಗಳಲ್ಲಿ ತೊಡಗಬೇಡಿ. ಪ್ರಾರ್ಥನೆ ಮತ್ತು ಧ್ಯಾನ ನಿಮಗೆ ಸಹಾಯ ನೀಡಲಿದೆ.

ಕನ್ಯಾರಾಶಿ

ಸಾಮಾಜಿಕ ಮನ್ನಣೆ, ಸಾರ್ವಜನಿಕ ಗೌರವಗಳು ನಿಮಗೆ ಸಿಗಲಿದೆ. ಹೊಸ ಉಡುಪು ಹಾಗೂ ಇತರ ವಸ್ತುಗಳ ಖರೀದಿಯು ನಿಮ್ಮನ್ನು ಕ್ರಿಯಾಶೀಲರಾಗಿಸುತ್ತದೆ. ನೀವು ಹೊಸ ವಾಹನವನ್ನು ಖರೀದಿಸಬಹುದು. ನಿಮ್ಮ ಹೆತ್ತವರು ಮತ್ತು ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧ ಕಂಡುಕೊಳ್ಳುವಿರಿ. ಗಣೇಶ ಹೇಳುವಂತೆ, ಗಂಡ ಹೆಂಡಿರ ಜಗಳ ಅಲ್ಪ ಸಮಯದ್ದಾಗಿದ್ದು, ಅದು ಕೊನೆಗೆ ಸಾಮೀಪ್ಯವನ್ನು ಇನ್ನಷ್ಟು ಬಲಗೊಳಿಸುತ್ತದೆ..

ತುಲಾರಾಶಿ

ಕುಟುಂಬದೊಳಗಿನ ಶಾಂತಿ ಮತ್ತು ಸಾಮರಸ್ಯವು ನಿಮ್ಮನ್ನು ಖುಷಿ ಮತ್ತು ಸಂತುಷ್ಟಿಗೊಳಿಸಲಿದೆ. ಸಹೋದ್ಯೋಗಿಗಳು ಮತ್ತು ಜತೆಕೆಲಸಗಾರರು ಸಹಾಯ ಮಾಡಲಿದ್ದಾರೆ ಹಾಗೂ ಪ್ರತಿಸ್ಪಂದಿಸಲಿದ್ದಾರೆ. ನಿಮ್ಮ ಸಾಮರ್ಥ್ಯವು ನಿಮಗೆ ಪ್ರಶಂಸೆ ಮತ್ತು ಪುರಸ್ಕಾರಗಳನ್ನು ತರಲಿವೆ. ಹೆತ್ತವರಿಂದ ಒಳ್ಳೆಯ ಸುದ್ದಿ ನಿಮ್ಮೆಡೆಗೆ ಬರಲಿದೆ. ಗಣೇಶ ಹೇಳುವಂತೆ, ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳು ದಬ್ಬಲ್ಪಡುತ್ತಾರೆ.

ವೃಶ್ಚಿಕರಾಶಿ

ಇಂದಿನ ದಿನ ಮಿಶ್ರ ಶಕುನಗಳ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ವಿದ್ಯಾರ್ಥಿಗಳು ಓದಿನಲ್ಲಿ ಒಳ್ಳೆಯದನ್ನು ನಿರೀಕ್ಷಿಸಬಹುದು. ಹೊಸ ಯೋಜನೆ ಮತ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಬೇಡ. ಆರ್ಥಿಕವಾಗಿ ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ನೀವು ಯಾವುದೇ ಕಾರಣಕ್ಕೂ ಶೇರು ಮಾರುಕಟ್ಟೆಯಿಂದ ದೂರವಿರಿ. ಸಾಧ್ಯವಿದ್ದರೆ ಪ್ರಯಾಣದಿಂದ ದೂರವಿರಿ.

ಧನುಸ್ಸು ರಾಶಿ

ನೀವು ಈ ದಿನ ಉತ್ಸಾಹದಿಂದ ಕೂಡಿರುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿರಾಸಕ್ತಿ ಮತ್ತು ನಿರಾಶೆಗಳನ್ನು ತಪ್ಪಿಸಲಾಗದು. ಸಂಬಂಧಿಕರು ಹೆಚ್ಚು ಮಾತುಕತೆ ಇಲ್ಲದೆ ಪ್ರತಿಸ್ಪಂದನೆರಹಿತರಾಗಿ ಇರುವರು. ಮನೆಯಲ್ಲಿ ವಿಷಣ್ಣಭಾವ ಇರಬಹುದು. ನೀವು ನಿಮ್ಮ ಆತ್ಮ ಗೌರವ ಕಳೆದುಕೊಳ್ಳದಂತೆ ರಕ್ಷಿಸಿಕೊಳ್ಳಬೇಕು.ನಷ್ಟಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವಾಹನ ಮತ್ತು ಆಸ್ತಿ ಸಂಬಂಧಿ ದಾಖಲೆಗಳಲ್ಲಿ ಲಕ್ಷ್ಯ ಮತ್ತು ಜಾಗರೂಕತೆ ಅಗತ್ಯ.

ಇದನ್ನೂ ಓದಿ: ದಶರಥರಾಮೇಶ್ವರಕ್ಕೂ ಮತ್ತು ಅಯೋಧ್ಯೆಗಿದೆ ಐತಿಹಾಸಿಕ ನಂಟು!

ಮಕರ ರಾಶಿ

ಹೊಸ ಉದ್ಯಮಗಳ ಪ್ರಾರಂಭಕ್ಕೆ ಈ ದಿನ ಸೂಕ್ತ ಎಂಬುದಾಗಿ ಗಣೇಶ ಕಾಣುತ್ತಾರೆ. ನಿಮ್ಮ ವೃತ್ತಿ, ವ್ಯವಹಾರ ಮತ್ತು ದೈನಂದಿನ ವ್ಯವಹಾರಗಳಲ್ಲಿ ತೃಪ್ತಿಕರ ನಿರ್ಧಾರಕ್ಕೆ ಬರಲು ಅನುಕೂಲಕರ ಮತ್ತು ಹಿತಕರ ಪರಿಸ್ಥಿತಿಯಿದೆ. ಸ್ನೇಹಿತರಿಂದ ವಸ್ತುರೂಪದಲ್ಲಿ ಮತ್ತು ಇತರ ರೂಪಗಳಲ್ಲಿ ಸಹಾಯ ಮತ್ತು ಸಹಕಾರಗಳು ಸಿಗಲಿವೆ ಎಂಬುದಾಗಿ ಗ್ರಹಗತಿಗಳು ಸೂಚಿಸುತ್ತವೆ. ಹಣಕಾಸು ಲಾಭ ಬರಲಿವೆ. ವಿದ್ಯಾರ್ಥಿಗಳು ಅನಾಯಾಸವಾಗಿ ತಮ್ಮ ಕೆಲಸಗಳನ್ನು ನಡೆಸಬಲ್ಲರು.

ಕುಂಭರಾಶಿ

ಎಲ್ಲಾ ರೀತಿಯ ಜಗಳ ಮತ್ತು ವಿವಾದಗಳಿಂದ ದೂರವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಖರ್ಚುಗಳಿಗೆ ಸಿದ್ಧರಾಗಿರಿ. ಮನೆಯ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಬರಬಹುದು. ಸೋಲು ಮತ್ತು ನಿರಾಶೆಗಳು ಕಂಡುಬರುತ್ತವೆ. ಗೊಂದಲ ಮತ್ತು ಅನಿರ್ಧಾರತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ಎಲ್ಲಾ ಕಾರಣಗಳಿಂದ ನಿಮ್ಮ ಆರೋಗ್ಯ ಕೆಡದಂತೆ ನೋಡಿಕೊಳ್ಳಿ.

ಮಿಥುನರಾಶಿ

ಇಂದಿನ ದಿನವು ಒಂದು ಮಂಗಲಕರ ಮತ್ತು ಚಟುವಟಿಕೆಯಿಂದ ಕೂಡಿದ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಚೈತನ್ಯ ಮತ್ತು ಧನಾತ್ಮಕ ಯೋಚನೆಗಳಿಂದ ತುಂಬಿರುವಿರಿ. ಈ ದಿನವು ಹೊಸ ಯೋಜನೆ ಮತ್ತು ಯೋಜನೆಗಳನ್ನು ಕಾರ್ಯರೂಪಗೊಳಿಮೀನರವ ದಿನ. ಸ್ನೇಹಿತರೊಂದಿಗೆ ಮತ್ತು ಸಂಬಂಧಿಗಳೊಂದಿಗೆ ರಾತ್ರಿಯ ಭೋಜನವನ್ನು ಆನಂದಿಸುವಿರಿ. ಆದರೆ ಎಚ್ಚರದಿಂದಿರಿ, ಅಬ್ಬರದ ಮನೋರಂಜನೆಯ ಲಕ್ಷಣಗಳಿವೆ. ಧಾರ್ಮಿಕ ಕೆಲಸ ಮತ್ತು ಕಿರು ಪ್ರಯಾಣಗಳು ಕೂಡ ಸಾಧ್ಯ. ಪ್ರಯತ್ನಗಳಿಗೆ ಯಶಸ್ಸು ಸಿಗುವ ಸಾಧ್ಯತೆಯಿದೆ

[t4b-ticker]

You May Also Like

More From Author

+ There are no comments

Add yours