ಪೈಲ್ಸ್ ಕಾಯಿಲೆಯಿಂದ ಬೇಸತ್ತ ಆಟೋಚಾಲಕ ಆತ್ಮಹತ್ಯೆಗೆ ಶರಣು.

 

ಚಳ್ಳಕೆರೆ-೧೩ ಇಲ್ಲಿನ ಸೂಜಿಮಲ್ಲೇಶ್ವರ ನಗರ ವಾಸಿ ಆಟೋಚಾಲಕ ಕೆ.ರವಿಕುಮಾರ್(೩೦) ಎಂಬ ವ್ಯಕ್ತಿ ತನಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದ ಪೈಲ್ಸ್ ಕಾಯಿಲೆತಿಂದ ಬೇಸತ್ತು ಪಾವಗಡ ರಸ್ತೆಯ ಸಾಯಿಮಂದಿರ ಎದುರಿನ ಜಮೀನಿನ ಬದುವಿನ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.

ಮೃತನ ತಂದೆ ಕಾಟಪ್ಪನಹಟ್ಟಿಯ ಕಲ್ಲೇಶಪ್ಪ, ಪೊಲೀಸರಿಗೆ ನೀಡಿದ ದೂರಿನಲ್ಲಿ ನನ್ನ ಮಗ ಮೃತ ಕೆ.ರವಿಕುಮಾರ್ ವಿವಾಹಿತನಾಗಿದ್ದು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿದ್ದ, ಪೈಲ್ಸ್ ಕಾಯಿಲೆ ಬಗ್ಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಗುಣಮುಖನಾಗಲಿಲ್ಲ. ಆದ್ದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ಧಾನೆಂದು ತಿಳಿಸಿದ್ಧಾನೆ. ಪಿಎಸ್‌ಐ ಧರಪ್ಪಬಾಳಪ್ಪ ದೊಡ್ಡಮನಿ ಪ್ರಕರಣ ದಾಖಲಿಸಿದ್ಧಾರೆ.

ಇದನ್ನೂ ಓದಿ: ಗ್ರಾಮೀಣ ರೈತ ಮತ್ತು ರೈತ ಮಹಿಳೆಯರಿಗೆ ತರಬೇತಿ

[t4b-ticker]

You May Also Like

More From Author

+ There are no comments

Add yours