ಚಿತ್ರದುರ್ಗ: ಚಿತ್ರದುರ್ಗ ( chitradurga) ತಾಲೂಕಿನ ಈಚಲನಾಗೇನಹಳ್ಳಿ ಬಳಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ 1 ಕೋಟಿ 50 ಲಕ್ಷ ದರೋಡೆಯನ್ನು ಮಾಡಿರುವ ಪ್ರಕರಣ ಇಂದು ನಡೆದಿದೆ.
ಬೈಕಲ್ಲಿ ಹಣ ಸಾಗಿಸುತ್ತಿದ್ದ ಮಹಮದ್ ಇರ್ಫಾನ್ ಹಾಗೂ ಝಾಕೀರ್ ಇಬ್ಬರು 1.50 ಕೋಟಿ ವೆಚ್ಚದ ಹಣವನ್ನು ತೆಗೆದುಕೊಂಡು ಬೈಕ್ ನಲ್ಲಿ ಹೋಗುವಾಗ 5-6 ಜನರ ಗುಂಪು ಕಾರು ಅಡ್ಡ ಹಾಕಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣವನ್ನು ದೋಚಿದ್ದಾರೆ.
ಇದನ್ನೂ ಓದಿ: ಒಂದೇ ರಾತ್ರಿ ಮೂರು ಮನೆಗಳಲ್ಲಿ ಸರಣಿ ಕಳ್ಳತನ
ಹೈದರಾಬಾದ್ ನಿಂದ ಹಣ ತಂದು, ಊರಿಗೆ ಹೋಗುವಾಗ ದರೋಡೆ ನಡದಿದೆ. ಈ ಹಣವನ್ನು ತನ್ನ ಅಣ್ಣ ಮಹಮದ್ ಸಮೀವುಲ್ಲಾ ಸ್ನೇಹಿತನ ಬಳಿಯಿಂದ ತಂದಿದ್ದ ಹಣ ಎಂದು ಮಾಹಿತಿ ನೀಡಿದ್ದು ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿದ ಹಣ ತೆಗೆದುಕೊಂಡು ಬರುವಾಗ ಘಟನೆ ನಡದಿದೆ.
ಡಿ.4 ರ ಬೆಳಗ್ಗೆ ಹೈದರಬಾದ್ ನಿಂದ ಹಣ ತಂದು ಊರಿಗೆ ತೆರಳುತ್ತಿದ್ದಾಗ ಘಟನೆ ನಡದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಚಿತ್ರದುರ್ಗದ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
[t4b-ticker]
+ There are no comments
Add yours