ನನಗೆ ಟಿಕೆಟ್ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ ಆತಂಕ ಬೇಡ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಚಿತ್ರದುರ್ಗ ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ ಅವರು ಟಿಕೆಟ್ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಯಾವ ಕಾರಣಕ್ಕೂ ಟಿಕೆಟ್ ಮಿಸ್ ಆಗಲ್ಲ. ನನಗೆ ಅದರ ಬಗ್ಗೆ ಎಳ್ಳಷ್ಟು ಅನುಮಾನವಿಲ್ಲ. ಅಂತಹ ಬೆಳವಣಿಗೆ ಆಗಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯ ರಾಜಕಾರಣದ ಬಗ್ಗೆ ವರಿಷ್ಠರು ನನ್ನ ಬಳಿ ವಿಚಾರಿಸಿದ್ದಾರೆ. ಎಲ್ಲಾ ಮಾಹಿತಿ ನೀಡಿದ್ದೇನೆ. ಯಡಿಯೂರಪ್ಪ ಅವರು ಸಹ ಹಿರಿಯೂರು, ಚಳ್ಖಕೆರೆ ವಿಚಾರವಾಗಿ ಚರ್ಚೆ ನಡೆಸಿದ್ದಿ ಮಾಹಿತಿ‌ ನೀಡಿದ್ದೇನೆ‌. ಗುಜರಾತ್ ಮಾದರಿ ಇಲ್ಲಿ ಅನುಸರಿಸುವುದಿಲ್ಲ.  ಕೇಲವರಿಗೆ ಟಿಕೆಟ್ ಇಲ್ಲ ಎಂಬ ಮಾಹಿತಿ ಇದೆ. ನನಗೆ ಟಿಕೆಟ್  ಪಕ್ಕ ಎಂದಿದ್ದು  ಕೇಂದ್ರ ತಂಡ ಸಹ ಇಲ್ಲಿನ ಮಾಹಿತಿ ಪಡೆದಿದ್ದಾರೆ. ಆದರೆ ನಮ್ಮ ಹಿತೈಷಿಗಳು, ಸ್ನೇಹಿತರು, ಬೆಂಬಲಿಗರು ಮಾಧ್ಯಮ ನೋಡಿ ಆತಂಕ ಪಡುತ್ತಿದ್ದು ಆದರೆ ನನಗೆ ದೃಢ ನಂಬಿಕೆ ಇದೆ .ಯಾರು ಸಹ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಂದೇಶ ರವಾನಿಸಿದ್ದಾರೆ..

[t4b-ticker]

You May Also Like

More From Author

+ There are no comments

Add yours