ವಿಧಾನಸಭೆ ಅಧಿವೇಶನ: ಇಂದು ನಡೆದ ವಿಧಾನಸಭೆಯಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆಡಳಿತ ಪಕ್ಷದ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾರಿಗೂ ಅನುದಾನ ನೀಡಲುಬಹಣ ಇರುತ್ತೆ. ವಿರೋಧ ಪಕ್ಷದವರಿಗೆ ಅನುದಾನ ಕೊರತೆ ಎದುರಾಗುತ್ತೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಚಳ್ಳಕೆರೆ ತಾಲೂಕಿನ ಗೋಸಿಕೆರೆ, ವಡೇರಹಳ್ಳಿಯಲ್ಲಿ ವೇದಾವತಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ಮಾಡಬೇಕು ಎಂದು ನಾವು 2019 ರಲ್ಲಿ ಬಜೆಟ್ ನಲ್ಲಿ ಸೇರಿಸಲಾಗಿತ್ತು.ಆದರೆ ಸಚಿವರು ಅನುದಾನ ನೀಡಿಲ್ಲ. ಅನುದಾನ ಯಾವಾಗ ಬಿಡುಗಡೆ ಆಗುತ್ತದೆ…? ಯಾಕೀ ತಾರತಮ್ಯ…? ಎಂದು ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡಿದರು. ಇದಕ್ಕೆ ಸಚಿವರು ಯಾವುದೆ ಭರವಣೆ ನೀಡದೆ ಹಣಕಾಸು ನೋಡಿಕೊಂಡು ಮುಂದೆ ನೊಡೋಣ ಎಂದು ಉತ್ತರಿಸಿದರು.
[t4b-ticker]
+ There are no comments
Add yours