ಚಳ್ಳಕೆರೆ: ಪೋಷಕರು ಓದಲು ಒತ್ತಾಯ ಪಡಿಸಿದರು ಎಂದು ಕುಪಿತಗೊಂಡ ಎಲ್ಎಲ್ಎಲ್ಸಿ ವಿದ್ಯಾರ್ಥಿ ತನ್ನ ಮನೆಯ ರೂಂನಲ್ಲಿ ನೇಣುಹಾಕಿಕೊಂಡು ಮೃತಪಟ್ಟ ಘಟನೆ ನಡೆದಿದೆ.
ನಗರದ ವಾಸವಿ ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಮುಕುಂದ(೧೫) ಎಂಬ ವಿದ್ಯಾರ್ಥಿ ಮಂಗಳವಾರ ಬೆಳಗ್ಗೆ ಅಜ್ಜ ಅನಂತಶೆಟ್ಟಿ, ತಾಯಿ ಶ್ವೇತ ಬೆಳಗ್ಗೆ ಎಬ್ಬಿಸಿ ಓದಲು ತಿಳಿಸಿದ್ದು, ಇದರಿಂದ ಕುಪಿತಗೊಂಡ ಬಾಲಕ ತನ್ನ ಮನೆಯ ರೂಂನ ಒಳಗೆ ತೆರಳಿ ಬಾಗಿಲು ಹಾಕಿಕೊಂಡು ಆರ್ಸಿಸಿ ಹುಕ್ಕಿಗೆ ಟವಲ್ ಮತ್ತು ಬೆಲ್ಟ್ನಿಂದ ನೇಣುಹಾಕಿಕೊಂಡು ಮೃಟಿರುತ್ತಾನೆ.
ವಾಸವಿ ಕಾಲೋನಿ ನಿವಾಸಿ ವೆಂಕಟೇಶ್ ಎಂಬುವವ ಪುತ್ರನಾಗಿದ್ದು, ಓದಿನಲ್ಲಿ ನಿರಾಸಕ್ತಿ ಹೊಂದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಇದ್ದ ಕಾರಣ, ಚನ್ನಾಗಿ ಓದಬೇಕು ಎಂದು ಬುದ್ದಿವಾದ ಹೇಳಿದ ಹಿನ್ನೆಲೆಯಲ್ಲಿ ನೇಣುಹಾಕಿಕೊಂಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಪಿಎಸ್ಐ ಧರೆಪ್ಪಬಾಳಪ್ಪ ದೊಡ್ಡಮನಿ ಪ್ರಕರಣ ದಾಖಲಿಸಿದ್ಧಾರೆ.
ಇದನ್ನೂ ಓದಿ: ಲೋಕಯುಕ್ತ ದಾಳಿ: PWD ಇಂಜಿನಿಯರ್ ಸತೀಶ್ ಬಾಬು ಬಳಿ ಸಿಕ್ಕಿದ್ದು ಎಷ್ಟು ಕೋಟಿ ಆಸ್ತಿ
[t4b-ticker]
+ There are no comments
Add yours