ಚಿತ್ರದುರ್ಗ, ಜ. 11: ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಜ್ಯೋತಿ ಎಸ್ ಅವರಿಗೆ, ” ಕನ್ನಡದಲ್ಲಿ ಅನುವಾದಗೊಂಡ ಮರಾಠಿ ಮಹಿಳಾ ಕಥಾ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ” ಕುರಿತ ಸಂಶೋಧನೆಗೆ ಪಿಎಚ್ಡಿ ಪದವಿ ನೀಡಲಾಯಿತು.
ಜನವರಿ 10, 2024ರಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ನುಡಿಹಬ್ಬದಲ್ಲಿ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಪಿಎಚ್ಡಿಪದವಿ ಪ್ರದಾನ ಮಾಡಿದರು. ಭಾಷಾಂತರ ವಿಭಾಗದ ಪ್ರಾಧ್ಯಾಪಕರಾದ ವಿ ಬಿ ಗಾಯಕ್ವಾಡ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಲಾಗಿತ್ತು.
ಇದನ್ನೂ ಓದಿ:ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನೊಂದಣಿ ಆರಂಭ
ಕನ್ನಡದಲ್ಲಿ ಮೊದಲ ಬಾರಿಗೆ ಮರಾಠಿಯಿಂದ ಕನ್ನಡಕ್ಕೆ ಬಂದ ಕಥೆಗಾರ್ತಿಯರನ್ನು ಕುರಿತ ಸಂಶೋಧನೆ ಇದಾಗಿದೆ.
+ There are no comments
Add yours