ಪುನೀತ್ ಅಭಿಮಾನಿಗಳು ದೇಶದ ಎಲ್ಲಾ ಕಡೆ ಇದ್ದಾರೆ: ಉದ್ಯಮಿ ಡಿ.ಎಸ್.ಪ್ರದೀಪ್

 

ಹೊಸದುರ್ಗ : ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಲ್ಲಿಯೂ ಅಭಿಮಾನಿಗಳನ್ನ ಹೊಂದಿದ್ದಾರೆ ಎಂದು ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ,ಸದ್ಗುರು ಸಂಸ್ಥೆಯ (SADGURU AYURVEDA)ಮುಖ್ಯಸ್ಥ ಉದ್ಯಮಿ ಡಿಎಸ್ ಪ್ರದೀಪ್ ತಿಳಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಕೊಯಮ್ಮತ್ತೂರು ನಿವಾಸಿ ಪುನೀತ್ ರಾಜಕುಮಾರ್ ಅಭಿಮಾನಿ ಸೈಕಲ್ ತುಳಿದು ಗಿನ್ನೆಸ್ ರೆಕಾರ್ಡ್ ಮಾಡಲು ಹೊರಟು ಹೊಸದುರ್ಗದಲ್ಲಿ ತಮಿಳುನಾಡಿನ ಕೊಯಮತ್ತೂರಿನ ಚೆಲುವರಾಜು ರವರನ್ನು ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಿ ಮಾತನಾಡಿದ ಅವರು ನೋಡಿದರೆ ಭಾಷೆಯನ್ನು ದಾಟಿದ ಅಭಿಮಾನ ಇವರಲ್ಲಿದೆಯೆಂದು ತಿಳಿಯುತ್ತದೆ,

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರು ದತ್ತು ಪಡೆದಿರುವ ಶಾಲೆಗಳು, ಅನಾಥಾಶ್ರಮಗಳು, ಅವರ ಸಮಾಜಮುಖಿ ಸೇವೆಗಳು ನನಗೆ ಜೀವನದಲ್ಲಿ ಸಮಾಜ ಸೇವೆ ಮಾಡಲು ಪ್ರೇರಣೆಯಾಗಿವೆ, ಇಂತಹ ಅಭಿಮಾನಿಗಳನ್ನು ಪಡೆದ ಪುನೀತ್ ರಾಜಕುಮಾರ್ ಅವರು ನಿಜವಾಗಿಯೂ ನಮ್ಮೆಲ್ಲರ ದೈವವೇ ಆಗಿದ್ದಾರೆ ಎಂದರು.

ಇದನ್ನೂ ಓದಿ: ಜಿಲ್ಲಾಧಿಕಾರಿಗಳ ಆಡಳಿತ ವೈಫಲ್ಯವಾಗಿದೆ : ಶಾಸಕ ಬಿ.ಜಿ.ಗೋವಿಂದಪ್ಪ ಆಕ್ರೋಶ

ಮಾಜಿ ಪುರಸಭಾ ಸದಸ್ಯ ಪ್ರವೀಣ್ ಮಾತನಾಡಿ ಹೊಸದುರ್ಗದ ಜನತೆ ಅಭಿಮಾನದಿಂದ ನಾವುಗಳು
ತಮಿಳುನಾಡಿನ ಕೊಯಂಬತ್ತೂರು ಮೂಲದ ಮುತ್ತು ಸೇಲ್ವನ್ ರಾಜ್ ರವರನ್ನು ಸ್ವಾಗತಿಸಿ ಸತ್ಕರಿಸಿ, ಅವರ ಈ ಸೈಕಲ್ ಜಾತ ಯಾವುದೇ ಅಡೆತಡೆಗಳಿಲ್ಲದೆ ಮುನ್ನುಗ್ಗಿ ದೇಶದಾದ್ಯಂತ ಸಂಚರಿಸಿ ಗಿನ್ನಿಸ್ ದಾಖಲೆ ಸೇರುವಂತಾಗಲಿ ಎಂಬುದೇ ನಮ್ಮ ಆಶಯ ಎಂದರು.

ಸ್ವಾಗತ ಕಾರ್ಯಕ್ರಮದಲ್ಲಿ ಪಿ ಎಸ್ ಐ ಭೀಮನ ಗೌಡ ಪಾಟೀಲ್,ವಿರಾಟ್ ಹಿಂದೂ ಮಹಾಸಾಗರ ಗಣಪತಿ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಮಾಜಿ ಅಧ್ಯಕ್ಷ ಮನೋಜ್, ಮುಖಂಡ ಫಕ್ರುದ್ದೀನ್, ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಗೌಡ್ರ ತಿಪ್ಪೇಸ್ವಾಮಿ, ಹೊಸಹಳ್ಳಿ ಚಂದ್ರು,
ಪುನೀತ್ ರಾಜಕುಮಾರ್ ಅಭಿಮಾನಿಗಳು ಯಾತ್ರೆಗೆ ಶುಭ ಕೋರಿ ಬಸವೇಶ್ವರ ವೃತ್ತದಲ್ಲಿ ಮುತ್ತು ಸೆಲ್ವರಾಜ್ ಅವರನ್ನು ಅಭಿನಂದಿಸಿದರು.

[t4b-ticker]

You May Also Like

More From Author

+ There are no comments

Add yours