ಚಳ್ಳಕೆರೆ: ಶ್ರೀರಾಮ್ ಟಿವಿಎಸ್ ವತಿಯಿಂದ ಬೃಹತ್ ಎಕ್ಸ್ಚೇಂಜ್ ಮತ್ತು ಸಾಲಮೇಳವನ್ನು ಆಯೋಜಿಸಿದ್ದು ಎಲ್ಲಾ ನಗರದ ಗ್ರಾಹಕರು ಸದುಪಯೋಗ ಮಾಡಿಕೊಳ್ಳಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಬಿಇಓ ಆಫೀಸ್ ಮುಂಭಾಗದಲ್ಲಿ ಶ್ರೀರಾಮ್ ಟಿವಿಎಸ್ ವತಿಯಿಂದ ಗ್ರಾಹಕರಿಗೆ ವಿಶೇಷವಾಗಿ ಏರ್ಪಡಿಸಿದ್ದ “ಮೆಘಾ ಟಿವಿಎಸ್ ಕಾರ್ನಿವಲ್ ” ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಟಿವಿಎಸ್ ಕಂಪನಿ ನಮ್ಮಸ್ವದೇಶಿ ಬ್ರಾಂಡ್ ಆಗಿ ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.ಮಾರುಕಟ್ಟೆಯಲ್ಲಿ ಹೆಚ್ಚಿನ ಪೈಪೋಟಿ ನಡುವೆ ಜನರನ್ನು ಆಕರ್ಷಣೆ ಮಾಡುತ್ತಿದೆ.ನಗರದ ಶ್ರೀರಾಮ್ ಟಿವಿಎಸ್ ಕಳೆದ ಮೂರು ತಿಂಗಳ ಹಿಂದೆ ಆರಂಭವಾಗಿ ನಗರದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.ಎಲ್ಲಾ ರಂಗದಲ್ಲಿ ಪೈಪೋಟಿ ಇದ್ದು ಯಾರು ಶ್ರಮದಿಂದ ಮಾರುಕಟ್ಟೆ ನಿರ್ವಹಣೆ ಮಾಡುತ್ತಾರೆ ಅವರಿಗೆ ಯಶಸ್ಸು ಕಾಣುಲು ಸಾಧ್ಯ ಎಂದರು.
ಶ್ರೀರಾಮ್ ಟಿವಿಎಸ್ ಕಾರ್ನಿವಾಲ್ ಎಂಬ ಬೃಹತ್ ಎಕ್ಸ್ಚೇಂಜ್ ಮತ್ತು ಸಾಲ ಏರ್ಪಡಿಸಿದ್ದು ಕಡಿಮೆ ಮುಂಗಡ ಹಣ ಮತ್ತು ಹಳೆಯ ವಾಹನ ಬದಲಿ ಮಾಡಿ ಕೇಲವ ಆಧಾರ ಮತ್ತು ಪಾನ್ ಕಾರ್ಡ್ ನೀಡಿ ಮನೆಗೆ ವಾಹನ ತೆಗೆದುಕೊಂಡು ಹೋಗಬಹುದು. ರೈತರು , ಕಾರ್ಮಿಕರು,ಶ್ರಮಿಕರು, ಯುವಕ ಯುವತಿಯರು ಹೆಚ್ಚು ಟಿವಿಎಸ್ ಬ್ರಾಂಡ್ ಕಡೆ ವಾಲುತ್ತಿದ್ದಾರೆ.ಟಿವಿಎಸ್ ಕಂಪನಿಯಲ್ಲಿ 75 ಸಾವಿರದಿಂದ 3.5೦ ಲಕ್ಷದವರೆಗೂ ಸಹ ವಾಹನಗಳು ಇದ್ದು ಆಯ್ಕೆ ಗ್ರಾಹಕರದಾಗಿದೆ. ಆದರೆ ವಿಶೇಷ ಎಂದರೆ ಎಲ್ಲಾವೂ ಗುಣಮಟ್ಟ ಮತ್ತು ಹೆಚ್ಚು ಮೈಲೇಜ್ ನೀಡುವ ವಾಹನಗಳಾಗಿದ್ದು ಎಲ್ಲಾರೂ ಟಿವಿಎಸ್ ಮೇಳದ ಸದುಪಯೋಗ ಮಾಡಿಕೊಳ್ಳಿ ಮತ್ತು ಇವರಿಗೆ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖಂಡ ರಾಮದಾಸ್, ಅಹೋಬಲ ಟಿವಿಎಸ್ ಮಾಲೀಕ್ ಪಿ.ವಿ.ಅರುಣ್, ಶ್ರೀರಾಮ್ ಟಿವಿಎಸ್ ಮಾಲೀಕ ಕಾಲುವೇಹಳ್ಳಿ ಆರ್.ಪಾಲಯ್ಯ ಮತ್ತು ಸಿಬ್ಬಂದಿ ವರ್ಗ ಇದ್ದರು.
[t4b-ticker]
+ There are no comments
Add yours