ನಗರದ ಅಭಿವೃದ್ದಿಗೆ ಎಲ್ಲಾರೂ ಒಟ್ಟಾಗಿ ಶ್ರಮಿಸಿ:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-18 ನಗರದ ಅಭಿವೃದ್ಧಿ ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿಗಳು ಪ್ರಮಾಣಿಕವಾಗಿ ಶ್ರಮಿಸಬೇಕು ಎಂದು ಶಾಸಕ ಟ.ರಘುಮೂರ್ತಿ( Mla T.Raghumurthy) ಹೇಳಿದರು.

ಅವರು ನಗರ ನೆಹರು ವೃತ್ತದಿಂದ ಬೆಂಗಳೂರು ರಸ್ತೆಯ ರೈಲ್ವೆ ಮೇಲ್ ಸೇತುವೆಯವರೆಗೆ ಸುಮಾರು 9 ಕೋಟಿ ವೆಚ್ಚದ ರಸ್ತೆ ಅಗಲೀಕರಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಪ್ರತಿನಿತ್ಯವೂ ಬೆಳೆಯುತ್ತಿದೆ, ವಾಹನ ದಟ್ಟನೆಯೂ ಹೆಚ್ಚಿದೆ ಜನರ ಅನುಕೂಲಕ್ಕಾಗಿ (challakere) ಬೆಂಗಳೂರು ರಸ್ತೆ ಅಗಲೀಕರಣ ಮಾಡುವ ಮೂಲಕ ವ್ಯಾಪಾರ ವಹಿವಾಟಿಕೆ ಅನುಕೂಲ ಮಾಡಲಾಗುವುದು. ಮುಂದಿನ‌ ದಿನಗಳಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವ ಬಳ್ಳಾರಿ ರಸ್ತೆ ಅಗಲೀಕರಣ ಕಾರ್ಯವನ್ನು ಮಾಡಲಾಗುವುದು ಎಂದರು. (Road work)
ಪ್ರಸ್ತುತ ಲೋಕೋಪಯೋಗಿ ಇಲಾಖೆ, ಅಪೆಂಡಿಕ್ಸ್ (challakere) ಯೋಜನೆಯಡಿ ನೆಹರು ವೃತ್ತದಿಂದ ಬೆಂಗಳೂರು ರಸ್ತೆಯ ರೈಲ್ವೆ ಮೇಲ್ಸೇತುವೆ ಅವರಿಗೆ ರಸ್ತೆ ಅಗಲೀಕರಣದ ಭೂಮಿ ಪೂಜ ಕಾರ್ಯಕ್ರಮದಲ್ಲಿ  ನೆರವೇರಿಸಿದ ಮುಂದಿನ ದಿನಗಳಲ್ಲಿ ಬಳ್ಳಾರಿ ರಸ್ತೆಯೂ ಅಗಲೀಕರಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎ ಇ ವಿಜಯ್ ಭಾಸ್ಕರ್, ಪೌರಾಯುಕ್ತಾ ಚಂದ್ರಪ್ಪ, ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ನ ಕುಮಾರ್, ಸದಸ್ಯರುಗಳಾದ ಚೈತುಂಬಿ, ಸುಮಾ, ಮುಖಂಡರಾದ ಪ್ರಕಾಶ್, ಶಶಿ, ಮಲ್ಲೇಶ್, ಹನುಮಂತರಾಯ, ನಾಗರಾಜ್, ರಾಜಪ್ಪ, ಬರ್ಮಣ್ಣ, ಬೋರಣ್ಣ, ವಿಶ್ವಕರ್ಮ ರಾಜ್ಯಾಧ್ಯಕ್ಷ ಆರ್ ಪ್ರಸನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours