ನೇರಲಗುಂಟೆ ಗ್ರಾಮದ ಕಣಿವೆಮಾರಮ್ಮ ದೇವಸ್ಥಾನದ ಸಮೀಪ ನೀರಿಗೆ ಬಿದ್ದು ಸಾವು
ಚಳ್ಳಕೆರೆ: (challakere) ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮದ ಕಣಿವೆಮಾರಮ್ಮ ದೇವಸ್ಥಾನದ ಸಮೀಪ ಕಲ್ಲಿನ ಕ್ಯಾರೆಯ ನೀರಿನಲ್ಲಿ ವ್ಯಕ್ತಿಯೊಬ್ಬ ಬಿದ್ದು ಸಾವನಪ್ಪಿದ್ದಾನೆ.
ಕಲ್ಲು ಕ್ವಾರೆಯ ನೀರಿನಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿ ಹೊಳಲ್ಕೆರೆ ತಾಲೂಕಿನ ದಾಸಯ್ಯನಹಟ್ಟಿ ಗ್ರಾಮದ ಗೋಪಾಲಪ್ಪ(45) ಎಂದು ಗುರುತಿಸಲಾಗಿದ್ದು ರಾತ್ರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಬಂದು ಮೃತದೇಹವನ್ನುಹೊರತೆಗೆದಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ:ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ ಮಹಿಳೆ ಸೇರಿ 3 ಜನರು ವಶಕ್ಕೆ
ಘಟನ ಸ್ಥಳಕ್ಕೆ ನಾಯಕನಹಟ್ಟಿ ಪೋಲಿಸ್ ಠಾಣೆ ಪಿಎಸ್ ಐ ದೇವರಾಜ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
ಈ ವೇಳೆ ಮೃತ ಗೋಪಾಲಯ್ಯನ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿತ್ತು.
[t4b-ticker]
+ There are no comments
Add yours