ಚಳ್ಳಕೆರೆ: (challakere) ವ್ಯವಹಾರಗಳಲ್ಲಿ ಸಾಲಮಾಡಿ ಮನನೊಂದಿದ್ದ ವ್ಯಕ್ತಿಯೊಬ್ಬ ಮನೆಯಲ್ಲೇ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆ. ತಾಲ್ಲೂಕಿನ ಸಿದ್ದಾಪುರದ ಕೆ.ಮಂಜುನಾಥ(೪೧) ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಮುತ್ತಿಗೇರಹಳ್ಳಿ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ, ಸಾಲ ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಹೆಂಡತಿ ತವರುಮನೆ ಸಿದ್ದಾಪುರಕ್ಕೆ ಆಗಮಿಸಿ ಅವರ ಜಮೀನಿನ ಹೊಂಗೆಮರಕ್ಕೆ ಸೋಮವಾರ ಮಧ್ಯಾಹ್ನ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ. ಮೃತನ ಪತ್ನಿ ಶಶಿಕಲಾ ಪೊಲೀಸರಿಗೆ ದೂರು ನೀಡಿದ್ದು, ಎಎಸ್ಐ ಮುಸ್ಟೂರಪ್ಪ ಪ್ರಕರಣ ದಾಖಲಿಸಿದ್ಧಾರೆ.
ಇದನ್ನೂ ಓದಿ: ಮಕ್ಕಳ ಎದುರಿನಲ್ಲೇ ನೇಣುಹಾಕಿಕೊಂಡು ಹೆಣವಾದ ಹೆತ್ತ ಅಪ್ಪ
[t4b-ticker]
+ There are no comments
Add yours