ಜೆಡಿಎಸ್ ತೊರೆದು ಶಾಸಕ ಟಿ.ರಘುಮೂರ್ತಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬೊಮ್ಮಕ್ಕನಹಳ್ಳಿ ಯುವಕರು

 

ಚಿತ್ರದುರ್ಗ: ಇಂದು ಚಿತ್ರದುರ್ಗದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಸಮ್ಮುಖದಲ್ಲಿ  ಬೊಮ್ಮಕ್ಕನಹಳ್ಳಿ ಗ್ರಾಮದ ವಿವಿಧ ಪಕ್ಷಗಳ ಯುವಕರು ಜೆಡಿಎಸ್ ಪಕ್ಷವನ್ನು ತೊರೆದು  ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಚುನಾವಣೆ ಸಂದರ್ಭದಲ್ಲಿ ಎಲ್ಲಾರೂ ಆಶ್ವಾಸನೆ ನೀಡುತ್ತಾರೆ. ಆದರೆ ನಾನು ಕೊಟ್ಟ ಮಾತಿನಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ  ಕಾರ್ಯಗಳಿಗೆ ಹೆಚ್ಚಿನ ಹಣ ತಂದು ನಾನಾ ವೇಗವಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇ ಆದರೆ ಬಿಜೆಪಿ ಸರ್ಕಾರದಲ್ಲಿ  ನಮ್ಮ ಕ್ಷೇತ್ರಕ್ಕೆ  ಅನುದಾನ ನೀಡಲಿಲ್ಲ. ಆದರು ಸಹ ನನಗೆ ಬರುವ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಿದ್ದು ನಿಮ್ಮೆಲ್ಲರ ಆಶೀರ್ವಾದ ನನಗಿರಲಿ ಎಂದರು.ಈ ಸಂದರ್ಭದಲ್ಲಿ   ಜೆಡಿಎಸ್ ಪಕ್ಷದ ಯುವಕರಾದ  ವೆಂಕಟೇಶ್
ರವಿ ,ಜೈಕುಮಾರ್, ಚಂದ್ರಶೇಖರ್, ನಾಗೇಶ್ ,ಮಂಜುನಾಥ ವೀರೇಶ್ ,ಅಭಿನಶ್ ,ಬಸವರಾಜ್ ಮತ್ತು
ಗೋವಿಂದರಾಜ್ ಕಾಂಗ್ರೆಸ್ ಸೇರ್ಪಡೆಯಾದರು. ಬೊಮ್ಮಕ್ಕನಹಳ್ಳಿ ಮುಖಂಡರದ ಬೀರಲಿಂಗಪ್ಪ ಉಮೇಶ್ ಶಿವಕುಮಾರ್ ಇದ್ದರು.

 

[t4b-ticker]

You May Also Like

More From Author

+ There are no comments

Add yours