News19kannada.Com
ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜಿಲ್ಲೆಯಲ್ಲಿನ ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ಆಚರಣೆಯನ್ನು ಪುರಲ್ಲಹಳ್ಳಿ ಗ್ರಾಮದ ಕಾಡುಗೊಲ್ಲರ ಬುಡಕಟ್ಟು ಆರಧ್ಯಾ ದೈವ ಕ್ಯಾತಪ್ಪನ ಜಾತ್ರೆ ಆರಂಭಗೊಂಡಿದೆ.
ಈ ಜಾತ್ರೆಗೆ ಕೆಲವೇ ನಿಮಿಷಗಳಲ್ಲಿ 21 ಅಡಿ ಎತ್ತರದ ಮಳ್ಳಿನ ಕಳ್ಳೆ ಗುಡಿ ನಿರ್ಮಾಣ ಮಾಡಲಾಗುತ್ತದೆ.
ಬಾರೆ, ಕಾರೇ, ಜಾಲಿ, ತುಗ್ಗಲಿ ಕಳ್ಳೆ ಯಲ್ಲಿ ಗುಡಿ ನಿರ್ಮಿಸಿ ಕಳಸರೋಹಣ ಮಾಡಲಾಗುತ್ತದೆ.
ಕಳ್ಳೆಯ ಮೂಲಕ ನಿರ್ಮಾಣ ಮಾಡಿರುವಂತಹ 21 ಅಡಿ ಎತ್ತರದ ಮುಳ್ಳಿನ ಗುಡಿಯನ್ನು ಬೊಮ್ಮನ, ಕೋಣನ ಬೆಡಗಿನ ಇಬ್ಬರು ಈರಗಾರರು
ಬರಿ ಗಾಲಿನಲ್ಲಿ ಹೇರಿ ಕಳಸ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯ ನಡೆಸುತ್ತಾರೆ.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ
ಈ ಜಾತ್ರೆಯು ಪುರ್ಲೆಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆಯುವ ಜಾತ್ರೆ ನಡೆಯುತ್ತದೆ
ಕಳಸ ಪ್ರತಿಷ್ಠಾಪನೆ ಮಾಡಿ ಐದನೆ ದಿನ ಕಳಸ ಕೀಳುವ ಕಾರ್ಯಕ್ರಮ ಜರುಗಲಿದೆ.
+ There are no comments
Add yours