ಜಿಲ್ಲಾ ನಾಯಕ ಸಮಾಜದಿಂದ ನೂತನ ಸಚಿವರು ಮತ್ತು ಶಾಸಕರಿಗೆ ಸನ್ಮಾನ :ಬಿ.ಕಾಂತರಾಜ್ 

 

ಚಿತ್ರದುರ್ಗ: ಜಿಲ್ಲಾ  ನಾಯಕ ಸಮಾಜ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ  ನಾಯಕ ಸಮಾಜದ ಮುಖಂಡ ಅಂಜಿ‌ನಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ  ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಮತ್ತು ಶಾಸಕರಾದಟಿ.ರಘುಮೂರ್ತಿ,ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್ .ಆಂಜನೇಯ, ನಾಯಕ ಸಮಾಜದ ಹೆಚ್.ಜೆ.ಕೃಷ್ಣಮೂರ್ತಿ,ಬಿ.ಕಾಂತರಾಜ್, ಹೊದಿಗೆರೆ ರಮೇಶ್ ಅವರನ್ನು  ಸನ್ಮಾನಿಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ಸಮಾಜದ ಹಿತ ದೃಷ್ಟಿಯಿಂದ ಕೇಲವು ಬೇಡಿಕೆಗಳನ್ನು  ಸಚಿವರು ಮತ್ತು ಶಾಸಕರಿಗೆ ಇದೇ ಸಂದರ್ಭದಲ್ಲಿ ಸಲ್ಲಿಸಲಾಗುವುದು. ಸಮುದಾಯದ ಮುಖಂಡರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಬೇಕು  ಎಂದರು.
ನಾಯಕ‌ ಸಮಾಜದ ಜಿಲ್ಲಾಧ್ಯಕ್ಷ  ಮಾತನಾಡಿ ವಾಲ್ಮೀಕಿ ಗುರುಪೀಠದ ನಮ್ಮ ಜಗದ್ಗುರುಗಳಾದ
ರಾಜಣ್ಣಹಳ್ಳಿಯ ಪ್ರಸನ್ನಾನಂದ ಮಹಾಸ್ವಾಮೀಜಿ ಅವರು ದಿವ್ಯ  ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ.ಎಲ್ಲಾ ಸಮಾಜದ ಬಂಧುಗಳು ಆಗಮಿಸಬೇಕು ಎಂದು ಮನವಿ ಮಾಡಿದರು.
ಈ‌ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರಾದ ಅಂಜಿನಪ್ಪ, ಕಾಟೀಹಳ್ಳಿ ಕರಿಯಪ್ಪ, ತಿಪ್ಪೇಸ್ವಾಮಿ, ಮಂಜಣ್ಣ, ಮಂಜುನಾಥ ರಘುನಂದನ್ ಇದ್ದರು.
[t4b-ticker]

You May Also Like

More From Author

+ There are no comments

Add yours