ಚಳ್ಳಕೆರೆ ನಗರಸಭೆಯಿಂದ ಮುಕ್ತಿವಾಹನ ಸೇವೆ : ಇಂಜಿನಿಯರ್ ಗೆ ಅಭಿನಂದನೆ

 

ಚಳ್ಳಕೆರೆ-20 ಚಳ್ಳಕೆರೆ ನಗರಕ್ಕೆ ಮುಕ್ತಿವಾಹನ ತರಲು ಶ್ರಮಿಸಿದ ಪರಿಸರ ಇಂಜಿನಿಯರ್ ನರೇಂದ್ರಬಾಬುರವರಿಗೆ ನಗರಸಭೆ ಸದಸ್ಯ ಬಿ.ಟಿ.ರಮೇಶಗೌಡ ಅಭಿನಂದಿಸಿದರು. ನಗರದ ಸಮಸ್ಯೆಯನ್ನು ಅರಿತ ಇಂಜಿನಿಯರ್ ನರೇಂದ್ರಬಾಬು ಮುಕ್ತಿವಾಹನ ತರುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ. ಅವರ ಕಾರ್ಯವನ್ನು ಜನರ ಪರವಾಗಿ ನಾನು ಅಭಿನಂದಿಸಿದ್ದೇನೆ. ಕಳೆದ ಹಲವಾರು ವರ್ಷಗಳಿಂದ ಮುಕ್ತಿವಾಹನ ಬೇಕು ಎಂದು ಸಾಮಾನ್ಯಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದರು. ಅದಕ್ಕೆ ಸ್ಪಂದಿಸಿದ ನಗರಸಭೆ ಆಡಳಿತ ಸ್ಪಂದಿಸಿ ಜನರ ಸೇವೆಗೆ ಅಣಿಯಾಗಿದೆ ಎಂದರು. ನಗರಸಭಾ ಸದಸ್ಯ ಹೊಯ್ಸಳಗೋವಿಂದ ಮೊದಲಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours