ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಹೃದಯ ತಪಾಸಣೆ

 

ಚಿತ್ರದುರ್ಗ: ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಂಡಿಯಾನ ಎಸ್ ಜೆ ಎಂ ಹಾರ್ಟ್ ಸೆಂಟರ್ (SJM Heart Centre)ಹಾಗೂ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಜೋಗಿಮಟ್ಟಿ ಗೆಳೆಯರ ಬಳಗ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಹೃದಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಶಿಬಿರ ನಡೆಸಲಾಯಿತು.

ಇಂಡಿಯಾನ ಎಸ್ ಜೆ ಎಂ ಹಾರ್ಟ್ ಸೆಂಟರ್ ಹೃದಯ ತಜ್ಞರಾದ ಡಾ.ಜಿ.ಮಂಜುನಾಥ್, ,ಡಾ.ರವೀಂದ್ರ ಜಿಲ್ಲಾ ಶಸ್ತ್ರಚಿಕಿತ್ಸಕ , ಜೋಗಿಮಟ್ಟಿ ಗೆಳೆಯರ ಬಳಗ ಸದಸ್ಯರು ಹಾಗೂ ಇಂಡಿಯಾನಾ ಎಸ್ಎಂ ಹಾರ್ಟ್ ಸೆಂಟರ್ ಮತ್ತು ಬಸವೇಶ್ವರ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮದುವೆಯಾಗಿ ನಾಲ್ಕೇ ದಿನಕ್ಕೆ ರಕ್ಷಣೆ ಕೋರಿ SP ಕಚೇರಿಗೆ ಆಗಮಿಸಿದ ನವಜೋಡಿ

ಶಿಬಿರವನ್ನು ಕನ್ನಡಾಂಬೆಗೆ ದೀಪ ಬೆಳಗುವುದರ ಮೂಲಕ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.

ಶಿಬಿರದಲ್ಲಿ ಹೆಚ್ಚು ರೋಗಿಗಳಿಗೆ ಉಚಿತ ಹೃದಯ ತಪಾಸಣೆ ಮಾಡಲಾಯಿತು. ಇದರಲ್ಲಿ ಬಿಪಿ, ಜಿ ಆರ್ ಬಿ ಎಸ್, 2ಡಿ ಎಕೋ, ಇಸಿಜಿ ತಪಾಸಣೆ ನಡೆಸಿ ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಲಾಯಿತು.

[t4b-ticker]

You May Also Like

More From Author

+ There are no comments

Add yours