ಚಿತ್ರದುರ್ಗ:ಮದುವೆಯಾದ ನಾಲ್ಕೇ ದಿನಕ್ಕೆ ನವಜೋಡಿಗಳು ರಕ್ಷಣೆ ಕೋರಿ ಚಿತ್ರದುರ್ಗ ಎಸ್ಪಿ ಕಚೇರಿಗೆ ( SP office) ತೆರಳಿ ಪೊಲೀಸರ ಮೊರೆ ಹೋಗಿದ್ದಾರೆ.
ನಮಗೆ ಪೋಷಕರಿಂದ ರಕ್ಷಣೆ ಕೊಡಿ ಎಂದು ಅಂಗಲಾಚಿದ ಜೋಡಿಗಳು ನವ ವಿವಾಹಿತತಾಗಿದ್ದು ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದು ನಾಲ್ಕು ದಿನಗಳ ಹಿಂದೆಯಷ್ಟೇ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪೋಷಕರಿಂದ ರಕ್ಷಣೆ ಕೋರಿ ಖಾಕಿ ಮೊರೆ ಹೋಗಿದ್ದು ಚಳ್ಳಕೆರೆ ತಾಲೂಕಿನ ಚಿಕ್ಕಮದುರೆ ಗ್ರಾಮದ ಮಲ್ಲಿಕಾರ್ಜುನ(25)ಹಿರಿಯೂರು ತಾಲೂಕಿನ ಸೊಂಡೆಕೆರೆಯ ಕೀರ್ತಿ(21) ನವ ಜೋಡಿ ಯಾಗಿದ್ದಾರೆ.
ಯುವತಿಯು ಕೀರ್ತಿ BSc ಓದಿದ್ದಾರೆ. ಖಾಸಗಿ ಬಸ್, ಕಾರು ಚಾಲಕನಾಗಿರೋ ಯುವಕ ಮಲ್ಲಿಕಾರ್ಜುನನ್ನು ಮಂಡ್ಯದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.
ಕೀರ್ತಿ ಪೋಷಕರು ನಮ್ಮನ್ನು ಬದುಕೋಕೆ ಬಿಡ್ತಿಲ್ಲ ಎಂಬ ಆರೋಪ ಯುವಕ ಮಾಡುತ್ತಿದ್ದು ಹೊಡಿತೀನಿ, ಬಡೀತೀನಿ ಅಂತಾ ಬೆದರಿಕೆ ಹಾಕ್ತಿದ್ದಾರೆ ಎಂದು ಆರೋಪ ಯುವಕನಾದ್ದಾಗಿದೆ.
ನಮಗೆ ರಕ್ಷಣೆ ನೀಡಿ ಅಂತಾ ಎಸ್ಪಿ ಕಚೇರಿಗೆ ಆಗಮಿಸಿದ ಜೋಡಿ
*ಬದುಕಿ, ಬದುಕಲಿ ಬಿಡಿ ಎನ್ನುತ್ತಿರುವ ನವಜೋಡಿ ಮನವಿ ಮಾಡುತ್ತಿದ್ದಾರೆ.
[t4b-ticker]
+ There are no comments
Add yours