ಹಿಂದೂ ಮಹಾಗಣಪತಿ ಭಾರತದ ದೇಶಭಕ್ತಿಯ ಸಂಕೇತ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ವಿಶ್ವಹಿಂದು ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಷ್ಟಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿ ಭಾರತದ ದೇಶಭಕ್ತಿಯ ಸಂಕೇತವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಂತಸ ವ್ಯಕ್ತಪಡಿಸಿದರು.

ಸೆ.17 ರಂದು ನಡೆಯುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಅಂಗವಾಗಿ ಗುರುವಾರ ನಗರದಲ್ಲಿ ನಡೆದ ಬೃಹತ್ ಬೈಕ್‍ರ್ಯಾಲಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮುಕ್ತಾಯಗೊಂಡ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಳೆದ ಎರಡು ವರ್ಷಗಳಿಂದ ಕೊರನಾ ಕಾರಣಕ್ಕಾಗಿ ಶೋಭಾ ಯಾತ್ರೆ ಸರಳವಾಗಿ ನಡೆಯಿತು. ಆದರೆ ಈ ಬಾರಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳವರು ಕೋಟ್ಯಾಂತರ ರೂ.ಗಳ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಶೋಭಾಯಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಪ್ರತಿ ವರ್ಷವೂ ಅಲ್ಲಲ್ಲಿ ಪ್ರಸಾದ ವಿನಿಯೋಗಿಸುತ್ತಾರೆ. ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆಯಿಂದ ಪ್ರೇರೇಪಿತರಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸಿ ವಿಜೃಂಭಣೆಯಿಂದ ಮೆರವಣಿಗೆ ನಡೆಸುತ್ತಿರುವುದು ಭಕ್ತರಲ್ಲಿ ಹುಮ್ಮಸ್ಸು ತುಂಬುತ್ತಿದೆ. ಶೋಭಾಯಾತ್ರೆಗಾಗಿ ಕಳೆದ ಎರಡು ಮೂರು ತಿಂಗಳುಗಳಿಂದ ವಿಶ್ವಹಿಂದುಪರಿಷತ್, ಭಜರಂಗದಳದ ಕಾರ್ಯಕರ್ತರು ಶ್ರಮಪಡುತ್ತಿದ್ದಾರೆಂದು ಗುಣಗಾನ ಮಾಡಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್ ಮಾತನಾಡುತ್ತ ನಾಡಿನೆಲ್ಲೆಡೆ ಗಣಪತಿ ಪ್ರತಿಷ್ಟಾಪನೆಯಲ್ಲಿ ದೇಶಭಕ್ತ ವೀರಸಾವರ್ಕರ್ ಫೋಟೋ ಇರಿಸಿ ಗೌರವ ಸೂಚಿಸಲಾಗುತ್ತಿದೆ. ಚಿತ್ರದುರ್ಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಪೆಂಡಾಲ್‍ಗೆ ವೀರಸಾವರ್ಕರ್ ಹೆಸರಿಡಲಾಗಿದೆ. ಕಳೆದ ಹದಿನಾರು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಟಾಪಿಸುವಾಗ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಪ್ರೇರಣೆಯಾಗಿತ್ತು. ಅದೇ ಈಗ ಶಿವಮೊಗ್ಗದವರಿಗೆ ಚಿತ್ರದುರ್ಗದ ಹಿಂದೂ ಮಹಾಗಣಪತಿ ಪ್ರೇರಣೆಯಾಗಿದೆ ಎಂದರೆ ಭಕ್ತರ ಸಂಖ್ಯೆ ಎಷ್ಟು ಜಾಸ್ತಿಯಾಗಿರಬಹುದೆಂದು ನೀವುಗಳೆ ಊಹಿಸಿಕೊಳ್ಳಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ದೇಶದ ವಿವಿಧ ಕಡೆಗಳಿಂದ ಪ್ರಪಂಚದ ಕೆಲವು ದೇಶಗಳಿಂದಲೂ ಭಕ್ತರು ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೀಕ್ಷಿಸಲು ಚಿತ್ರದುರ್ಗಕ್ಕೆ ಆಗಮಿಸುತ್ತಾರೆ. ಎರಡು ವರ್ಷಗಳಿಂದ ಶೋಭಾಯಾತ್ರೆಯನ್ನು ಯೂಟೂಬ್, ಫೇಸ್‍ಬುಕ್‍ನಲ್ಲಿ ಲೈವ್ ನೀಡಲಾಗುತ್ತಿದೆ. ಇದಕ್ಕೆ ಹಿಂದೂಗಳ ಶಕ್ತಿ, ಭಕ್ತಿಯೇ ಮೂಲಕ ಕಾರಣ. ಇಡಿ ದೇಶಕ್ಕೆ ಹಾಗೂ ಹಿಂದೂ ಸಂಘಟನೆಗೆ ನಮ್ಮ ಹಿಂದೂ ಮಹಾಗಣಪತಿ ಪ್ರೇರಣೆಯಾಗಿದೆ ಎಂದು ಹೇಳಿದರು.
ವಿಶ್ವಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪೇಲು, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಯುವ ಮುಖಂಡ ಡಾ.ಸಿದ್ದಾರ್ಥ, ಜಿ.ಎಸ್.ಅನಿತ್‍ಕುಮಾರ್, ಜಿ.ಎಂ.ಸುರೇಶ್ ಇನ್ನು ಮುಂತಾದವರು ಬೈಕ್‍ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಹೊಳಲ್ಕೆರೆ ರಸ್ತೆಯಲ್ಲಿರುವ ಕನಕವೃತ್ತದಿಂದ ಹೊರಟ ಬೈಕ್‍ರ್ಯಾಲಿ ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿವೃತ್ತ, ಬರುಜನಹಟ್ಟಿವೃತ್ತ, ಆನೆಬಾಗಿಲು, ಏಕನಾಥೇಶ್ವರಿ ಪಾದಗುಡಿ ಮುಂಭಾಗದಿಂದ ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿರಸ್ತೆ, ಸ್ಟೇಡಿಯಂ ರಸ್ತೆ, ಜಟ್‍ಪಟ್ ನಗರ, ಮೆದೇಹಳ್ಳಿ ರಸ್ತೆ, ಜೆ.ಸಿ.ಆರ್, ಅಂಬೇಡ್ಕರ್ ಸರ್ಕಲ್‍ನಲ್ಲಿ ಸಂಚರಿಸಿತು.

[t4b-ticker]

You May Also Like

More From Author

+ There are no comments

Add yours