ಚಳ್ಳಕೆರೆ | ವಲಸೆ ಶ್ರೀವೀರಭದ್ರಸ್ವಾಮಿ ಕಾರ್ತಿಕ ದೀಪೋತ್ಸವ ಯಶಸ್ವಿ

 

ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ವಲಸೆ ಗ್ರಾಮದ ಶ್ರೀವೀರಭದ್ರೇಶ್ವರಸ್ವಾಮಿಯ ಕಾರ್ತಿಕದೀಪೋತ್ಸವ, ರಥೋತ್ಸವ ಹಾಗೂ ಅಗ್ನಿಕುಂಡ ಕಾರ್ಯಕ್ರಮಗಳು ಎಲ್ಲ ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆದವು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಪೂಜಾರ್ ಅಜ್ಜಪ್ಪ, ಪ್ರತಿವರ್ಷದಂತೆ ಈ ವರ್ಷವೂ ನೂರಾರು ಭಕ್ತರ ಸಹಕಾರದಿಂದ ಶ್ರೀವೀರಭದ್ರಸ್ವಾಮಿಯ ಕಾರ್ತಿಕ ದೀಪೋತ್ಸವಭಕ್ತಿ ಮತ್ತು ಸಂಭ್ರಮದಿAದ ನಡೆದಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳೊAದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿಸಮಾಳ, ನಂದಿಕೋಲು ಕುಣಿತ, ಕೋಲಾಟ ಮುಂತಾದವುಗಳ ಪ್ರದರ್ಶಗಳು ಜನರ ಮನಸೆಳೆದವು.

ಇದನ್ನೂ ಓದಿ: ಚಿತ್ರದುರ್ಗ ಕಾಂಗ್ರೆಸ್ ಎಂಪಿ ಟಿಕೆಟ್ ಗೆ ಒತ್ತಾಯಿಸಿ ಶೀಘ್ರ ಪಾದಯಾತ್ರೆಗೆ ನಿರ್ಧಾರ

ಪ್ರತಿವರ್ಷದಂತೆ ಈ ವರ್ಷವೂ ಶ್ರೀಸ್ವಾಮಿಯ ಮುಕ್ತಿಬಾವುಟವನ್ನು ಸಾರ್ವಜನಿಕರವಾಗಿ, ಭಕ್ತರ ಸಮ್ಮುಖದಲ್ಲಿ ಹರಾಜು ಮಾಡಲಾಯಿತು. ಚಳ್ಳಕೆರೆಯ ಬೆಸ್ಕಾಂ ಇಲಾಖೆ ಅಧಿಕಾರಿ ಸಿ.ನಾಗರಾಜು ೨೬೦೦೧ರೂಗೆ ಮುಕ್ತಿಬಾವುಟ ಪಡೆದುಕೊಂಡರು. ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಮುಖಂಡರಾದ ತಿಪ್ಫೇಸ್ವಾಮಿ, ಮೈಲನಹಳ್ಳಿ ಚಂದ್ರಪ್ಪ, ದಿನೇಶ್, ನಾಗಿರೆಡ್ಡಿ, ಚನ್ನಗಾನಹಳ್ಳಿ ಮಲ್ಲೇಶ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours