ಚಳ್ಳಕೆರೆ:ಮದಕರಿನಗರದ ಮಸೀದಿ ಬಳಿ ಇರುವ ರಾಜಣ್ಣ ಎಂಬುವವರ ನಿವಾಸದಲ್ಲಿ ಅವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ರಿತೀಶ್(೨೦) ಹೊಟ್ಟೆನೋವು, ಎದೆನೋವು ತಾಳಲಾರದೆ ಮನೆಯಲ್ಲೇ ನೇಣುಹಾಕಿಕೊಂಡು(challakere) ಮೃತಪಟ್ಟಿರುತ್ತಾನೆ.
ಚಿತ್ರದುರ್ಗದ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ರಿತೀಶ್ಗೆ ಕಳೆದ ಎಂಟು ತಿಂಗಳಿನಿಂದ ಹೊಟ್ಟೆ, ಎದೆ ನೋವು ಇದ್ದು ವೈದ್ಯರಲ್ಲಿ ತೋರಿಸಿದರೂ ಗುಣಮುಖನಾಗದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಠಾಣಾಧಿಕಾರಿ ಚಿದಾನಂದಪ್ಪ ಪ್ರಕರಣ ದಾಖಲಿಸಿದ್ಧಾರೆ.
ಇದನ್ನೂ ಓದಿ: ಚಳ್ಳಕೆರೆ ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
[t4b-ticker]
+ There are no comments
Add yours