ಬಳ್ಳಾರಿ: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ( Devendrappa) ಮಗನ ವಿರುದ್ಧ ಲವ್ ಮಾಡಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿರುವ ಆರೋಪವನ್ನು ಯುವತಿ ಮಾಡಿದ್ದಾಳೆ. ದೇವೆಂದ್ರಪ್ಪ ಮಗ ರಂಗನಾಥ್(Ranganath) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು(Bengaluru) ಮೂಲದ ಯುವತಿಗೆ ವಂಚನೆ ಮಾಡಿದ್ದಾರೆ ಎನ್ನಲಾಗ್ತಿದೆ. ಮೈಸೂರಿನಲ್ಲಿ(Mysore) ರಂಗನಾಥ್ ಪ್ರಾಧ್ಯಪಕನಾಗಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಒಂದೂವರೆ ವರ್ಷದ ಹಿಂದೆ ಸಂತ್ರಸ್ತೆಗೆ ರಂಗನಾಥ್ ಪರಿಚಯವಾಗಿದ್ದಾರೆ ಎನ್ನಲಾಗ್ತಿದೆ. ಸ್ನೇಹಿತರ ಮೂಲಕ ರಂಗನಾಥ ಪರಿಚಯವಾಗಿತ್ತು. 42 ವರ್ಷದ ರಂಗನಾಥ್ಗೆ 24 ವರ್ಷದ ಯುವತಿಗೆ ಜೊತೆ ಲವ್ ಡೂವಿ ಇತ್ತು ಎನ್ನಲಾಗ್ತಿದೆ.
ಇದನ್ನೂ ಓದಿ:ಮುರುಘಾ ಶರಣರು ಬಿಡುಗಡೆ ಮಾತನಾಡದೇ ಮೌನವಾಗಿ ದಾವಣಗೆರೆ ಪ್ರಯಾಣ
ಖಾಸಗಿ ಪಾರ್ಟಿಯಲ್ಲ ಸಂತ್ರಸ್ತೆಯ ಪರಿಚಯ ಮಾಡಿಕೊಂಡು ಕಳೆದ ಜನವರಿಯಲ್ಲೇ ಮೈಸೂರಿನ ಹೋಟೆಲ್ನಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಕೆಲ ಕಾಲ ಈ ಜೋಡಿಯಲ್ಲಿ ಹೊಂದಾಣಿಕೆ ಸೇರಿ ಎಲ್ಲಾ ಚೆನ್ನಾಗಿತ್ತು ಆದರೆ ಯುವತೊ ಮದುವೆ ಆಗುವಂತೆ ಯುವತಿ ಕೇಳಿದ್ದಾಳೆ. ಈ ವೇಳೆ ಸಂತ್ರಸ್ತೆಯನ್ನು ಅವೈಡ್ ಮಾಡೋಕೆ ರಂಗನಾಥ್ ಶುರು ಮಾಡಿದ್ದಾರೆ. ಬಳಿಕ ರಂಗನಾಥ್ ವಿಚಾರವನ್ನು ದೇವೆಂದ್ರಪ್ಪ ಗಮನಕ್ಕೆ ಯುವತಿ ತಂದಾಗ, ಯುವತಿ ವಿರುದ್ಧ ಬಿಜೆಪಿ ಸಂಸದ ದೇವೇಂದ್ರಪ್ಪ ನನಗೆ ಗೊತ್ತಿಲ್ಲಮ್ಮ, ನೀವು ಸೇರೋದು ನನಗೇನು ಗೊತ್ತು ಎನ್ನುತ್ತಾರೆ , ಅವನ ಏನು ಬೇಕಾದರೂ ಮಾಡಿಕೋ ಎಂದಾಗ ಯುವತಿ ಸರ್ ಎಫ್ ಐಆರ್ ಮಾಡತ್ತಿನಿ ಎಂದಿದ್ದಾಳೆ ಆ ವೇಳೆ ಸಹ ಮಾಡಿಕೋ ತಪ್ಪಿಗೆ ಶಿಕ್ಷೆಯಾಗಲಿ ಎಂಬಂತೆ ಮಾತಡಿದ್ದಾರೆ ಎನ್ನಲಾಗ್ತಿದೆ. ಬಳಿಕ ಯುವತಿ ಬೇರೆ ದಾರಿ ಕಾಣದೇ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸದ್ಯ ಸಂತ್ರಸ್ಥೆ ಹಾಗೂ ರಂಗನಾಥ್ಗೆ ಬಸವನಗುಡಿ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಆದ್ರೆ ಇದುವರೆಗೂ ರಂಗನಾಥ್ ಹಾಗೂ ಸಂತ್ರಸ್ತೆ ವಿಚಾರಣೆಗೆ ಹಾಜರಾಗಿಲ್ಲ. ಇತ್ತ ರಂಗನಾಥ್ ನಿಂದಲೂ ಯಾವುದೇ ಮಾಹಿತಿಯಿಲ್ಲ. ಹಾಗಾಗಿ
ಬಸವನಗುಡಿ ಮಹಿಳಾ ಪೊಲೀಸರಿಂದ ತನಿಖೆ ಮಾಡಿತ್ತಿದ್ದಾರೆ.
+ There are no comments
Add yours