ಹಳೆ ದ್ವೇಷದ ಹಿನ್ನೆಲೆ| ಹಬ್ಬದ ರಾತ್ರಿಯೇ ಯುವಕನ ಮರ್ಡರ್

 

ಚಿತ್ರದುರ್ಗ: (chitradurga)  ಹಳೇ ದ್ವೇಷದ ಕಾರಣಕ್ಕೆ ತಮ್ಮ ಊರಿನ ಹಬ್ಬದಂದು ಚಾಕು ಇರಿದು ಯುವಕನೊಬ್ಬನ್ನು ಕೊಲೆ ಮಾಡಲಾಗಿದೆ.

ಹೊಸದುರ್ಗ ತಾಲೂಕಿನ ನಾಗನಾಯಕನಕಟ್ಟೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಯುವಕತ ನಡುವೆ ಹಳೆ ದ್ವೇಷಕ್ಕೆ ಇಂತಹ ಘಟನೆ ಮಾಡಿದ್ದು ಸುಮಾರು 21 ವರ್ಷದ ಯುವಕ ಮನೋಜ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ತಮ್ಮ ಹಳ್ಳಿಯಲ್ಲು ಹಬ್ಬದ ವಾತವರಣ ಮನೆ ಮಾಡಿತ್ತು. ಆದರೆ ಮನೋಜ್ ಹಾಗೂ ರಘು ಮತ್ತಿತರರ ನಡುವಿನ ವೈಷಮ್ಯದಿಂದ ಗಲಾಟೆ ನಡೆದಿದ್ದು, ಚಾಕುವಿನಿಂದ ಇರಿದಿದ್ದಾರೆ.
ತಕ್ಷಣ ಮನೋಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹಿರಿಯೂರು ತಾಲೂಕಿನ ಸೋಮೆನಹಳ್ಳಿ ತಾಂಡಾದ ರಘು ಹಾಗೂ ಮನೋಜ್ ನಡುವೆ ಹಳೆಯ ವೈಷಮ್ಯ ಇತ್ತು ಎಂದು ಹೇಳಲಾಗುತ್ತಿದೆ.ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ಕಣಿವೆಮಾರಮ್ಮ ದೇವಸ್ಥಾನದ ಸಮೀಪ ನೀರಿಗೆ ಬಿದ್ದು ವ್ಯಕ್ತಿ ಸಾವು

ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆ ಸಿಪಿಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours