ಅಭಿವೃದ್ದಿ ಮೆಚ್ಚಿ ಬಿಜೆಪಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ: ಶಾಸಕ ಟಿ.ರಘುಮೂರ್ತಿ

 

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ  ತುರುವನೂರು ಹೋಬಳಿಯ ಬಾಗೇನಹಾಳ್, ಚಿಕ್ಕಜಗಳೂರು  ಗ್ರಾಮದಲ್ಲಿ ಶಾಸಕ ಟಿ.ರಘುಮೂರ್ತಿ ಅವರು ಕಾರ್ಯವನ್ನು  ಮತ್ತು ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ  ಅನೇಕ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು  ಕಾಂಗ್ರೆಸ್ ಪಕ್ಷವನ್ನು  ಸೇರ್ಪಡೆ ಮಾಡಿಕೊಂಡರು.
ತುರುವನೂರು ಹೋಬಳಿಯ ಚಿಕ್ಕ ಜಗಳೂರು ಗ್ರಾಮದ ಜೆ.ಡಿ.ಎಸ್. ಮುಖಂಡರುಗಳಾದ ಬೋಸಯ್ಯ, ಓಬಯ್ಯ, ಸಣ್ಣ ಪಾಪಯ್ಯ, ತಮ್ಮಣ್ಣ, ಜಯಣ್ಣರವರು  ಮತ್ತು ತುರುವನೂರು ಹೋಬಳಿಯ ಬಾಗೇನಹಾಳ್ ಗ್ರಾಮದ  ಬಿಜೆಪಿ ಮುಖಂಡರುಗಳಾದ ಕೊಂಡ್ಲಹಳ್ಳಿ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ಹಳ್ಳಿ ಮೇಷ್ಟ್ರು , ರಾಜಪ್ಪ, ಕಲ್ಲೇಶಪ್ಪ, ನಾಗರಾಜು ಇಂದು ಕಾಂಗ್ರೆಸ್ ಸೇರ್ಪಡೆ ‌ಆದರು.
ಈ  ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಕ್ಷೇತ್ರದ ಜನರ ನಾನು ಮಾಡಿದ ಅಭಿವೃದ್ಧಿ ಕಾರ್ಯವನ್ನು  ನೋಡಿದ್ದಾರೆ.ಕಾಂಗ್ರೆಸ್ ಸರ್ಕಾರದಲ್ಲಿ ನೂರಾರು  ಕೋಟಿ  ಹಣವನ್ನು  ತಂದು ನಗರ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ‌. ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಬಿಟ್ಟು ತುರುವನೂರು ಹೋಬಳಿಯ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಜನರ ಮಧ್ಯೆ ನಿತ್ಯ ಕೆಲಸ ಮಾಡುತ್ತಿದ್ದು ಜನರು ನಮ್ಮ ಜೊತೆ ಇದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಡೀ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದು  ನನ್ನನ್ನು ಮನೆ ಮಗನಂತೆ ಬೆಳೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷದ ಮುಖಂಡರು  ಬರುತ್ತಿದ್ದು  ಮತ್ತಷ್ಟು ಬಲ ತಂದಿದೆ‌ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ಮುಖಂಡರಾದ  ವೆಂಕಟೇಶ್,  ಮಾಜಿ ಜಿ.ಪಂ. ಸದಸ್ಯ ಬಾಬು ರೆಡ್ಡಿ ಹಾಗೂ  ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours