ಚಳ್ಳಕೆರೆ:ಕನ್ನಡದ ಮೇರು ನಟ ಡಾ. ಡಾಕ್ಟರ್ ವಿಷ್ಣುವರ್ಧನ್ ರವರು ಇಂದಿನ ಯುವಕರಿಗೆ ಸ್ಪೂರ್ತಿದಾಯಕವಾಗಿದ್ದಾರೆ ಅವರ ಆದರ್ಶದ ಬದುಕು ಇಂದಿನ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಿದೆಯಂತೆ ತಹಸಿಲ್ದಾರ್ ಏನ್ ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ನೆಹರು ಸರ್ಕಲ್ ನಲ್ಲಿ ವಿಷ್ಣು ವರ್ಧನ್ ಅಭಿಮಾನಿಗಳ ಸಂಘದವರು ಏರ್ಪಡಿಸಿದ್ದಂತಹ ಈ ಮೂರನೆಯ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಇಂದಿಗೂ ಜೀವಂತವಾಗಿದೆ ವಿಷ್ಣುವರ್ಧನ್ ಅವರ ನವ ರಸಗಳನ್ನು ಕರಗತ ಮಾಡಿಕೊಂಡಿದ್ದರು ಐತಿಹಾಸಿಕ ಪ್ರಣಯ ಮತ್ತು ದುರಂತದ ಚಿತ್ರಗಳಲಿ ಅವರು ಮನೋಜ್ಞವಾಗಿ ಅಭಿನಯ ಮಾಡಿದ್ದಾರೆ ಪಾತ್ರಗಳಿಗೆ ಜೀವ ತುಂಬುತ್ತಿದ್ದರು ಕನ್ನಡ ನಾಡಿನ ಬಗ್ಗೆ ಕನ್ನಡ ಭಾಷೆಯ ಬಗ್ಗೆ ಅವರು ಹೊಂದಿದ್ದ ಅಂತಹ ತುಡಿತ ಅನನ್ಯವಾದದ್ದು ಹೃದಯಗೀತೆ ಕರ್ಣ ಬಂಧನ ಯಜಮಾನ ಮುತ್ತಿನ ಹಾರ ಮತ್ತು ಆಪ್ತಮಿತ್ರ ಚಿತ್ರಗಳು ಸೇರಿದಂತೆ ಇವರ ಅಭಿನಯದ ಕನ್ನಡ ಚಲನಚಿತ್ರಗಳು ವಿಶ್ವವೇ ಬೆಳ್ಳಿತೆರೆಯ ಕಡೆ ಮುಖ ಮಾಡುವಂತೆ, ಮಾಡಿದಂತ ಚಿತ್ರಗಳು ಇವರ ಆದರ್ಶಗಳನ್ನು ಅವರ ಸಮಾಜ ಸೇವೆಯನ್ನು ಇಂದಿನ ಯುವಕರು ರೂಡಿಸಿಕೊಳ್ಳಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಚೇತನ್ ಕುಮಾರ್ ಉಪಸ್ಥಿತರಿದ್ದರು.
[t4b-ticker]
+ There are no comments
Add yours