ವರದಿ: ಎಸ್.ವೇದಮೂರ್ತಿ
೨೨ಹೆಚ್.ಎಲ್.ಕೆ.೧
ಹೊಳಲ್ಕೆರೆ : ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ತಾಲೂಕಿನ ಕಣಿವೆಯ ಗಿಲಿಕೆನಹಳ್ಳಿ ಲಂಬಾಣಿಹಟ್ಟಿ ಹತ್ತಿರ ಸಂಭವಿಸಿದೆ. ಮೃತ ರ್ದುದೈವಿಗಳು ಹೊಳಲ್ಕೆರೆ ತಾಲೂಕಿನ ಗಂಗಸಮುದ್ರದ ರಮೇಶ್ ೨೫ ವರ್ಷ ಹಾಗೂ ಮಹಾಲಿಂಗಪ್ಪ ೨೬ ವರ್ಷದ ಯುವಕರು ಎನ್ನಲಾಗಿದೆ. ಹಳಹಳ್ಳಿ ಗೊಲ್ಲರಹಟ್ಟಿಯಲ್ಲಿದ್ದ ಇದ್ದ ಜಾತ್ರೆಗೆ ತೆರಳಿ ಗಂಗಸಮುದ್ರ ಗ್ರಾಮಕ್ಕೆ ಬೈಕ್ ನಲ್ಲಿ ವಾಪಾಸು ಬರುತ್ತಿರುವಾಗ ಗಿಲಿಕೆನಹಳ್ಳಿ ಲಂಬಾಣಿಹಟ್ಟಿ ಹತ್ತಿರ ಚಿತ್ರದುರ್ಗದಿಂದ ಸಿಮೇಟ್ ಹೊತ್ತ ಲಾರಿ ಮುಂದೆ ಹೊಗುತ್ತಿದ್ದ ಬೈಕ್ ಡಿಕ್ಕಿ ಪಡಿಸಿದ್ದು, ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಯುವರಾಜ್ ಪ್ರಕರಣ ದಾಖಲಿಸಿದ್ದಾರೆ.
+ There are no comments
Add yours