ತುಮಕೂರು🙁Tumkur) ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲಿ ಭಾರೀ ದುರಂತ ತಪ್ಪಿಹೋಗಿದೆ.
ಇದನ್ನೂ ಓದಿ: ಬಿಸಿಯೂಟ ಸೇವಸಿ 38 ಮಕ್ಕಳು ಅಸ್ವಸ್ಥ
ಬುಧವಾರ ತಡರಾತ್ರಿ ಈ ಅಪಘಾತ ನಡೆ,ದಿದ್ದು ಸಚಿವ ಮಧು ಬಂಗಾರಪ್ಪನವರು ಇದ್ದ ಕಾರು ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಲಾರಿ ಚಾಲಕ ಕಾರನ್ನು ಉಜ್ಜಿಕೊಂಡು ತೆರಳಿದ್ದಾನೆ.
ಇನ್ನು ಅಪಘಾತದಲ್ಲಿ ಕಾರಿನ ಮುಂಭಾಗ ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
+ There are no comments
Add yours