ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿಗಳು ಅಂತರಾಜ್ಯ ಗಂಧದ ಕಟ್ಟಿಗೆ ಕಳ್ಳರಿಗೆ ಬಲೆ ಬೀಸಿ ಹೆಡೆಮೂರಿ ಕಟ್ಟಿ 250 ಕೆಜಿ ಗಂಧದ ಕಟ್ಟಿಗೆಯ ಸಮೇತ ನಾಲ್ಕು ಜನರನ್ನು ತಮ್ಮ ಪಡೆದುಕೊಂಡಿದ್ದಾರೆ. ಇದಕ್ಕೆ ಪ್ರಕರಣ ಧಾರವಾಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸುಮಾರು 30 ಲಕ್ಷ ಮೌಲ್ಯದ ಗಂಧದ ಕಟ್ಟಿಗೆಗಳನ್ನ ಅರಣ್ಯ ಇಲಾಖೆಯಲ್ಲಿ ಖಡಿದು ಮಾರಾಟ ಮಾಡುತ್ತಿರುವ ಜಾಲವೊಂದನ್ನ ಆರ್ ಎಪ್ ಓ ಆರ್ ಎಸ್ ಉಪ್ಪಾರ ಅವರ ನೇತೃತ್ವದ ತಂಡ ಕಟ್ಟಿಗೆ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆದರು ಕೂಡ ಮೂವರು ತಪ್ಪಿಸಿಕೊಂಡು ಹೋಗಿದ್ದಾರೆ. ಆರೋಪಿಗಳಾದ ಗುರುಮೂರ್ತಿ, ಮುದಕಪ್ಪ ಪೂಜಾರಿ, ಬೀಮಪ್ಪ ಸುಣಗಾರ, ಹಿರಿಯಪ್ಪ ಹಿರೇಮನಿ ಈ ನಾಲ್ವರನ್ನ ವಶಕ್ಕೆ ಪಡೆದು ಕಂಬಿ ಹಿಂದೆ ಕಳಿಸಿದ್ದಾರೆ..ಇನ್ನು ಆರೋಪಿಗಳ ಜೊತೆಗೆ ಒಂದು ದ್ವಿಚಕ್ರವಾಹನ (ಪಲ್ಸ್ ರ್ ಬೈಕ್) ಒಂದು ಮಾರುತಿ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.ಇನ್ನೂ ದಾಳಿವೇಳೆ ತಪ್ಪಿಸಿಕ್ಕೊಂಡ ಮೂವರಿಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹುಡುಕಾಟವನ್ನ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ಭರ್ಜರಿ ಭೇಟೆ ಜೊತೆಗೆ ಅರಣ್ಯ ಕಳ್ಳರಿಗೆ ಎಚ್ಚರಿಕೆ ರಾವನಿಸಿದ್ದಾರೆ.
+ There are no comments
Add yours