ಸರಣಿ ಅಪಘಾತಗಳಿಗೆ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ವಾಲ್ಮೀಕಿ ಸರ್ಕಲ್ ಬಳಿ ಶುಕ್ರವಾರ ಹಂಪ್ ನಿರ್ಮಾಣ

 

ವರದಿ: ತಿಪ್ಪೇಶ್.

ಚಳ್ಳಕೆರೆ : ವಾರದಲ್ಲಿಯೇ ವಾಲ್ಮೀಕಿ ಸರ್ಕಲ್ ಬಳಿ ಭೀಕರ ಎರಡು ಅಪಘಾತಗಳು ಸಂಭವಿಸಿ ನಗರದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು.
ಈ ಅಪಘಾತಗಳು ಮೇನ್ಸ್ ಲಾರಿಗಳಿಂದ ಸಂಭವಿಸಿದ್ದರಿಂದ ವಿವಿಧ ಸಂಘಟನೆಗಳ ಮುಖ್ಯಸ್ತರು ವಾಲ್ಮೀಕಿ ವೃತ್ತದಲ್ಲಿ ಹಂಪ್ ನಿರ್ಮಾಣ ಮಾಡುವಂತೆ ರಸ್ತೆ ತಡೆದ ಧರಣಿ ನಡೆಸಿದರು. ಈ ಧರಣಿಗೆ ಮಣಿದ ತಾಲ್ಲೂಕು ಆಡಳಿತವು ಲೋಕೋಪಯೋಗಿ ಇಲಾಖೆಯಿಂದ ಶುಕ್ರವಾರ ವಾಲ್ಮೀಕಿ ಸರ್ಕಲ್ ಬಳಿ ಹಂಸ ನಿರ್ಮಾಣ ಮಾಡಿದರು.

ವಾಲ್ಮೀಕಿ ಸರ್ಕಲ್ ಬಳಿ ರಸ್ತೆ ಎರಡು ಬದಿಗಳಲ್ಲಿ ಹಂಸ ನಿರ್ಮಾಣ ಮಾಡದೆ ಒಂದೆ ಕಡೆ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಒಂದೆ ಕಡೆ ನಿರ್ಮಾಣ ಮಾಡುವುದನ್ನು ಸಾರ್ವಜನಿಕರು ಹಾಗೂ ಕರವೇ ತಾಲ್ಲೂಕು ಅಧ್ಯಕ್ಷರು ವಿರೋಧಿಸಿ, ರಸ್ತೆಯ ಎರಡು ಕಡೆ ಹಂಪ್ಗಳು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಂದೆ ಕಡೆ ನಿರ್ಮಾಣ ಮಾಡುತ್ತೇವೆ, ಮುಂದಿನ ದಿನಗಳ ಇನ್ನೊಂದು ಕಡೆ ನಿರ್ಮಾಣ ಮಾಡುತ್ತೇವೆ ಎಂದರು ಇದಕ್ಕೆ ಒಪ್ಪದ ಸಾರ್ವಜನಿಕರು ಎರಡು ಮಾಡಬೇಕು ಹಂಪ್ಗಳು ಇಲ್ಲವೆಂದರೆ ಪ್ರತಿಭಟನೆ‌ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು‌.
ಹಾಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎರಡು ಕಡೆ ಮಾಡುತ್ತೇವೆ ಎಂದರು.

[t4b-ticker]

You May Also Like

More From Author

+ There are no comments

Add yours