ಬೆಂಗಳೂರು: ಶೇ.40ರಷ್ಟು ಗುತ್ತಿಗೆ ಹಣದಲ್ಲಿ ಕಮೀಷನ್ ಆರೋಪ ಮಾಡಿದ್ದಂತ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬಸ್ಥರಿಗೆ ಇದೀಗ ಕರ್ನಾಟಕ ಕಾಂಗ್ರೆಸ್ ನಿಂದ 11 ಲಕ್ಷ ಪರಿಹಾರವನ್ನು ಘೋಷಿಸಿದೆ.
ಇಂದು ಬೆಳಗಾವಿಯ ಮೃತ ಸಂತೋಷ್ ಮನೆಗೆ ಕಾಂಗ್ರೆಸ್ ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಭೇಟಿ ಮಾಡಿ, ಸಾಂತ್ವಾನ ಹೇಳಿದರು.
ಈ ಬಳಿಕ ಮಾತನಾಡಿದಂತ ಸಿದ್ಧರಾಮಯ್ಯ ನಾವು ಇಲ್ಲಿಗೆ ರಾಜಕೀಯ ಮಾಡೋದಕ್ಕೆ ಬಂದಿಲ್ಲ. ಅಮಾನವೀಯ ಸಾವಿಗೆ ನ್ಯಾಯಕೇಳಲು ಬಂದಿದ್ದೇವೆ. ಯಾವುದೇ ಸಾವಿಗೆ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ. ನಮ್ಮ ಪಕ್ಷದಿಂದ ಕೈಲಾದಷ್ಟು ಸಹಾಯ ಮಾಡೋ ನಿಟ್ಟಿನಲ್ಲಿ ಪರಿಹಾರವಾಗಿ 11 ಲಕ್ಷ ನೀಡಲಾಗುತ್ತಿದೆ. ಸರ್ಕಾರ 1 ಕೋಟಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
[t4b-ticker]
+ There are no comments
Add yours