ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಕೆಂಡಾರ್ಚನೆ

 

ಚಿತ್ರದುರ್ಗ ಏ. ೧೬
ನಗರದ ವೀರಶೈವ ಸಮಾಜದವತಿಯಿಂದ ಇಂದು ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಕೆಂಡಾರ್ಚನೆ ಕಾರ್ಯಕ್ರಮವನ್ನು ಸಾಂಗವಾಗಿ ನೇರವೇರಿಸಲಾಯಿತು.
ಇಂದು ಮುಂಜಾನೆ ನಗರದ ರಂಗಯ್ಯನ ಬಾಗಿಲು ಬಳಿಯ ಉಜ್ಜಯನಿ ಮಠದ ಆವರಣದಿಂದ ಪ್ರಾರಂಭವಾದ ಗುಗ್ಗಳವು ನಗರದ ದೊಡ್ಡಪೇಟೆ, ಚಿಕ್ಕಪೇಟೆ, ಆನೇಬಾಗಿಲು, ಸಂತೇಪೇಟೆಯ ಮೂಲಕ ನೀಲಕಂಠೇಶ್ವರ ಸ್ವಾಮಿಯ ದೇವಾಲಯವನ್ನು ತಲುಪಿತು. ಈ ಗುಗ್ಗಳದಲ್ಲಿ ಹರಪನಹಳ್ಳಿ ಪಟ್ಟಣದ ಮೇಗಳ ಪೇಟೆಯ ಶ್ರೀ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನ ಸಮಿತಿವತಿಯವರು ಭಾಗವಹಿಸಿದ್ದರು.
ಗುಗ್ಗಳ ಸಾಗಿದ ದಾರಿಯುದ್ದಕ್ಕೂ ಗುಗ್ಗಳ ದೇವಸ್ಥಾನ ಸಮಿತಿಯವರು ವೀರಭದ್ರನ ಬಗ್ಗೆ ಒಡಪುಗಳನ್ನು ಹೇಳುವುದರ ಮೂಲಕ ಆತನ ನಾಮಸ್ಮರಣೆಯನ್ನು ಮಾಡುತ್ತಾ ಸಾಗುತ್ತಿದ್ದ ದೃಶ್ಯ ಕಂಡು ದಾರಿಯುದ್ದಕ್ಕು ಭಕ್ತಾಧಿಗಳು ತಮ್ಮ ಮನೆಯ ಮುಂದೆ ಗುಗ್ಗಳ ಆಗಮಿಸುವ ಸಮಯದಲ್ಲಿ ನೀರನ್ನು ಹಾಕುವುದರ ಮೂಲಕ ಸ್ವಾಗತಿಸಿದರು. ಈ ಸಮಯದಲ್ಲಿ ವೀರಭದ್ರ ಸ್ವಾಮಿಗೆ ಹಣ್ಣು ಕಾಯಿಯನ್ನು ಮಾಡಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ದಾರಿಯುದ್ದಕ್ಕೂ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಭಕ್ತಾಧಿಗಳು ಮಜ್ಜಿಗೆ, ಮಾನಕದ ವ್ಯವಸ್ಥೆಯನ್ನು ಮಾಡಿದ್ದರು.
ನೀಲಕಂಠಶ್ವೇರ ಸ್ವಾಮಿಯ ದೇವಾಲಯದ ಮುಂದೆ ಸುಮಾರು ೨ ಅಡಿ ಆಗಲ, ೬ ಅಡಿ ಉದ್ದದ ಕೆಂಡದ ಗುಂಡಿಯನ್ನು ತೆಗದಿದ್ದು ಅದರಲ್ಲಿ ನಿನ್ನೆ ರಾತ್ರಿಯಿಂದಲೇ ಕೆಂಡವನ್ನು ಮಾಡುವುದರ ಮೂಲಕ ಕೆಂಡವನ್ನು ತುಳಿಯಲು ಅನುಕೂಲವನ್ನು ಮಾಡಿಕೂಡಲಾಗಿತ್ತು. ಕೆಂಡದ ಗುಂಡಿಗೆ ಎಡೆಯನ್ನು ಅರ್ಪಿಸಿ, ಅದರಲ್ಲಿ ಮಣ್ಣಿನ ಮಡಿಕೆಯಲ್ಲಿ ಹಾಲನ್ನು ಕಾಯಿಸಿ ನಂತರ ವೀರಭದ್ರನ ವೇಷವನ್ನು ತೊಟ್ಟ ಪುರುವಂತರು ಮೊದಲು ಕೆಂಡವನ್ನು ತುಳಿದು ದೇವಾಲಯದ ಒಳ ಹೋದ ಮೇಲೆ ನಂತರ ಭಕ್ತಾಧಿಗಳು ಕೆಂಡವನ್ನು ತುಳಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷರಾದ ಎಲ್.ಬಿ. ರಾಜಶೇಖರ್ ಸೇರಿದಂತೆ ಇತರೆ ಪದಾಧಿಕಾರಿಗಳು ಗುಗ್ಗಳದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours