ಚಿತ್ರದುರ್ಗ,ಆಗಸ್ಟ್06:
ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ಜಿಲ್ಲೆಯಲ್ಲಿ ಆಗಸ್ಟ್ 09 ರಿಂದ 16 ರವರೆಗೆ ವೈದ್ಯಕೀಯ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ಆಡಿಪ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ವಿವಿಧ ರೀತಿಯ ವಿಕಲಚೇತನರುಗಳಿಗೆ ಅವರುಗಳ ಅಗತ್ಯತೆಗನುಸಾರ ಅವಶ್ಯವಿರುವ ಟ್ರೈಸೈಕಲ್, ಗಾಲಿ ಕುರ್ಚಿ, ಊರುಗೋಲು, ಕಂಕಳುದೊಣ್ಣೆ, ರೊಲೇಟರ್, MSITED ಕಿಟ್, ಸಿ.ಪಿ.ಚೇರ್ ವಿತ್ ಕಮೋಡ್, ಅಂಧರ ಬೀಳಿಕೋಲು, ಬ್ರೈಲ್ಸ್ಲೇಟ್/ಬ್ರೈಲ್ಕಿಟ್, ಬ್ರೈಲ್ ಕೇನ್/ ಸ್ಮಾಟ್ಕೇನ್/ಪೋನ್, ಡೈಸಿಪ್ಲೇಯರ್, ಶ್ರವಣ ಸಾಧನ, ಕೃತಕ ಕಾಲು, ಕ್ಯಾಲಿಫರ್ ಮುಂತಾದ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ವಿಕಲಚೇತನರು ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಲಿಮ್ಕೋ ಆಕ್ಸಿಲರಿ ಪ್ರೊಡಕ್ಷನ್ ಸೆಂಟರ್ ಬೆಂಗಳೂರು ಇವರ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಗಳಲ್ಲಿ ವೈದ್ಯಕೀಯ ಮೌಲ್ಯಮಾಪನ ಶಿಬಿರಗಳನ್ನು ವಿಕಲಚೇತರಿಗೆ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರು ಕೆಳಕಂಡ ದಾಖಲಾತಿಗಳೊಂದಿಗೆ ಹಾಜರಾಗಲು ತಿಳಿಸಿದೆ.
ಶಿಬಿರ ನಡಯುವ ದಿನ ಮತ್ತು ಸ್ಥಳ: ಆಗಸ್ಟ್ 09 ರಂದು ಜಿಲ್ಲಾ ಬಾಲ ಭವನ ಸಭಾಂಗಣ ಚಿತ್ರದುರ್ಗ, ಆಗಸ್ಟ್10 ರಂದು ಸಾರ್ವಜನಿಕ ಆಸ್ಪತ್ರೆ ಚಳ್ಳಕೆರೆ, ಆಗಸ್ಟ್11 ರಂದು ಸಾರ್ವಜನಿಕ ಆಸ್ಪತ್ರೆ ಹೊಸದುರ್ಗ, ಆಗಸ್ಟ್12 ರಂದು ಸಾರ್ವಜನಿಕ ಆಸ್ಪತ್ರೆ ಹಿರಿಯೂರು, ಆಗಸ್ಟ್13 ರಂದು ಸಾರ್ವಜನಿಕ ಆಸ್ಪತ್ರೆ ಮೊಳಕಾಲ್ಮೂರು ಹಾಗೂ ಆಗಸ್ಟ್ 16ರಂದು ಸಾರ್ವಜನಿಕ ಆಸ್ಪತ್ರೆ ಹೊಳಲ್ಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಶಿಬಿರ ನಡೆಯಲಿದೆ.
ದಾಖಲಾತಿಗಳು: ಅಂಗವಿಕಲರ ಗುರುತಿನ ಚೀಟಿ, ಯು.ಡಿ.ಐ.ಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, ಬಿ.ಪಿ.ಎಲ್.ಕಾರ್ಡ್, ಆದಾಯ ಪ್ರಮಾಣಪತ್ರ, ಎಂ.ಜಿ.ಎನ್.ಆರ್.ಇ.ಜಿ (ನರೇಗಾ) ಕಾರ್ಡ್, ಅಂಗವಿಕಲರ ಪಿಂಚಣಿ ಆದೇಶ ಪ್ರತಿ ಜೆರಾಕ್ಸ್ , ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ಎರಡು ಭಾವಚಿತ್ರಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲ ಭವನ ಆವರಣ ಸ್ಟೇಡಿಯಂ ರಸ್ತೆ, ಚಿತ್ರದುರ್ಗ ದೂರವಾಣಿ ಸಂಖ್ಯೆ 08194-235284/86ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಜೆ.ವೈಶಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[t4b-ticker]
+ There are no comments
Add yours