ರಸ್ತೆ ಅಪಘಾತ: ಯುವಕರ ದುರ್ಮರಣ. ಮಾಜಿ ಸಚಿವ ಎಚ್.ಆಂಜನೇಯ ಸಂತಾಪ.

 

ಹೊಳಲ್ಕೆರೆ: ತಾಲೂಕಿನ ಸಿಂಗೇನಹಳ್ಳಿ
ಲಂಬಾಣಿಹಟ್ಟಿಯ ಯುವ ಕಾಂಗ್ರೆಸ್
ಮುಖಂಡರಾದ ಜಗದೀಶ್(30), ಪ್ರಸನ್ನ(30)
ಇಬ್ಬರು ಅವಿವಾಯಿತ ಯುವಕರು ಸೈಕಲ್
ಮೋಟಾರ್ ರಸ್ತೆ ಅಪಘಾತದಲ್ಲಿ
ಜ.13ರಂದು ಬೆಂಕಿಕೆರೆ ರಸ್ತೆಯಲ್ಲಿ
ದುರ್ಮರಣ ಹೊಂದಿದ್ದಾರೆ.
ಅಪಘಾತದ ವೇಳೆ ಮೃತ ಪ್ರಸನ್ನ
ಅವರನ್ನು ಚಿಕತ್ಸೆಗಾಗಿ ಶಿವಮೊಗ್ಗದ ಸರ್ಕಾರಿ
ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೇ ಅಂದೇ
ಅಸುನೀಗಿದ್ದರು. ಹಾಗೆಯೇ ಜ.15ರ
ಭಾನುವಾರ ಬೆಳಗಿನ ಜಾವ
ಜಗದೀಶ್‍ರವರು ನಿಧನ ಹೊಂದಿದರು.
ಜಗದೀಶ್‍ರವರ ಅಂತಿಮ ಸಂಸ್ಕಾರವು
ಸಿಂಗೇನಹಳ್ಳಿ ಲಂಬಾಣಿಹಟ್ಟಿಯಲ್ಲಿ
ಭಾನುವಾರ ನೆರವೇರಿತು. ಈ ವೇಳೆ ಮಾಜಿ
ಸಚಿವರಾದ ಎಚ್.ಆಂಜನೇಯರವರು

ಜಗದೀಶ್‍ರವರ ಅಂತಿಮ ಸಂಸ್ಕಾರ ಪಡೆದು
ಕುಟುಂಬದ ಸದಸ್ಯರಿಗೆ ಸಂತ್ವಾನ
ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ
ಗಂಗಾಧರ್, ಗ್ರಾಮ ಪಂಚಾಯತಿ
ಅಧ್ಯಕ್ಷೆ ಮಂಜುಳ, ತಾಪಂ ಸದಸ್ಯರಾದ
ರಾಮಚಂದ್ರಪ್ಪ, ಗ್ರಾಪಂ ಸದಸ್ಯರಾದ
ರಾಮಗಿರಿ ರಾಜು, ಯುವ ಮುಖಂಡರಾದ
ಸುನೀಲ್ ನಾಯಕ್, ಮುಖಂಡರಾದ
ತುಪ್ಪದಹಳ್ಳಿ ದಿನೇಶ್, ಕಣಿವೇಹಳ್ಳಿ
ಶಿವರಾಜ್, ಕಾಯಿ ರುದ್ರೇಶ್, ಹಾಜರಿದ್ದರು.
ಮೃತರಿಗೆ ಸಂತಾಪ ವ್ಯಕ್ತಪಡಿಸಿ
ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ,
ಸೈಕಲ್ ಮೋಟಾರ್ ಮೇಲೆ ತೆರಳುವಾಗ
ನಿತ್ಯವೂ ಅಪಘಾತ ಸಂಭವಿಸುತ್ತಲೇ ಇವೆ.
ಯುವಕರು ಪ್ರಾಣ
ಕಳೆದುಕೊಳ್ಳುತ್ತಿರುವುದು
ದುರ್ದೈವ. ಇದಕ್ಕೆ ಮೂಲ ಕಾರಣ ಹೆಲ್ಮೇಟ್
ಧರಿಸದೇ ಇರುವುದೇ ಮುಖ್ಯ ಕಾರಣ
ಹೀಗಾಗಿ ಸೈಕಲ್ ಮೋಟಾರಿನಲ್ಲಿ ಚಾಲನೆ
ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್
ಧರಿಸಿವಂತೆ ಮನವರಿಕೆ ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours