ಮೋದಿ ಟೀಮ್ ಸೇರಿದ ಕರ್ನಾಟಕದ ನಾಲ್ಕು ಸಂಸದರು,

 

ದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಯಂಗ್ ಕ್ಯಾಬಿನೆಟ್ ಕಡೆ ಗಮನ ಹರಿಸುವ ಕಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಿಂದ ಬಿಜೆಪಿ ಪಕ್ಷದಿಂದ  26 ಸಂಸದರನ್ನು ಆಯ್ಕೆ ಮಾಡಿದ್ದರು. ಆದರೆ ಇಬ್ಬರಿಗೆ  ಮಾತ್ರ ಮಂತ್ರಿ ಸ್ಥಾನ  ಸದಾನಂದಗೌಡ ಮತ್ತು ನಿಧನ ಹೊಂದಿದ ಸುರೇಶ್ ಅಂಗಡಿ  ಅವರಿಗೆ ನೀಡಿದ್ದರು. ಆದರೆ ಇಂದು ನಡೆದ ಪುನರ್ ರಚನೆಯಲ್ಲಿ ಇಂದು ಸದನಾಂದಗೌಡ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇಂದು ರಾಜ್ಯಕ್ಕೆ  ನಾಲ್ಕು  ಸಂಸದರಿಗೆ ಮಂತ್ರಿ ಭಾಗ್ಯ ದೊರೆತಿದೆ. ಚಿತ್ರದುರ್ಗದ ಎ.ನಾರಾಯಣಸ್ವಾಮಿ, ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಶೋಭ ಕರಂದ್ಲಾಜೆ,  ಬೀದರ್ ಸಂಸದ ಭಗವತ್ ಖೂಬ ಅವರು ಕೇಂದ್ರ ಮಂತ್ರಿ ಮಂಡಲಕ್ಕೆ ರಾಜ್ಯದಿಂದ ಮೋದಿ ಟೀಮ್ ಸೇರಿದ್ದಾರೆ.

[t4b-ticker]

You May Also Like

More From Author

+ There are no comments

Add yours