ಚಳ್ಳಕೆರೆಯಲ್ಲಿ ಯುವಕನ ಮರ್ಡರ್: ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಶಂಕೆ.

 

*ಚಳ್ಳಕೆರೆಯಲ್ಲಿ ಭೀಕರ ಮರ್ಡರ್: ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ : ನಗರದ ಕುರುಬ ಹಾಸ್ಟೆಲ್ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದಲ್ಲಿ ಯುವಕನೋರ್ವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರಬಹುದು ಎಂದು ಸ್ಥಳದಲ್ಲಿ ದೊಣ್ಣೆಗಳು ಇರುವುದರಿಂದ  ದೊಣ್ಣೆಯಲ್ಲಿ ತಳಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡರು ಪೋಲಿಸ್ ರ ತನಿಖೆಯ ನಂತರ ಸತ್ಯ. ಹೊರಬರಲಿದೆ

ಯುವಕನ ಗುರಿತು ಮಾಹಿತಿ ಲಭ್ಯವಿಲ್ಲ ಯುವಕ ಮುಖ-ಮೂತಿಗೆ ಹೊಡೆತ ಬಿದ್ದಿದ್ದು, ಯುವಕನು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ. ಇನ್ನು ಸ್ಥಳಕ್ಕೆ ಹೆಚ್ಚು ವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗಾ ನಂದಗಾವಿ, ಡಿವೈ ಎಸ್ ಪಿ ಕೆ.ವಿ.ಶ್ರೀಧರ್, ಪೊಲೀಸ್ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನು ಸ್ಥಳಕ್ಕೆ ಶಾಸಕ ಟಿ.ರಘುಮೂರ್ತಿ, ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮೀ ಭೇಟಿ ನೀಡಿ ವೀಕ್ಷಿಸಿದರು…..

[t4b-ticker]

You May Also Like

More From Author

+ There are no comments

Add yours