ಹೊಸದುರ್ಗ; ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಬಿಜೆಪಿ ಮುಖಂಡರುಗಳಾದ ವಸಂತ್ ಕುಮಾರ್, ಓಂಕಾರ ಮೂರ್ತಿ, ಹನುಮಂತಪ್ಪ ಮತ್ತು ಅವರ ಬೆಂಬಲಿಗರು ಸೇರಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾದ ಟಿ.ಮಂಜುನಾಥ್ ಅವರ ಜೊತೆ ಕೈ ಜೋಡಿಸಿ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಟಿ.ಮಂಜುನಾಥ್ ಅವರ ಜೊತೆ ಸೇರ್ಪಡೆಗೊಂಡ ಬಿಜೆಪಿ ಮುಖಂಡರಿಗೆ ಶಲ್ಯ, ಹೂವಿನ ಮಾಲೆ ಹಾಕುವುದರ ಮುಖಾಂತರ ಮುಖಂಡರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬ್ಯಾಲದಕೆರೆ ಗ್ರಾಮದ ಹನುಮಂತಪ್ಪ, ಸ್ಥಳೀಯ ಬಿಜೆಪಿ ನಾಯಕರಿಂದ ನಾವೆಲ್ಲಾ ಬೇಸತ್ತಿದ್ದೇವೆ. ಇವರನ್ನೆಲ್ಲಾ ನಂಬಿ ನಮ್ಮ ಗ್ರಾಮದಲ್ಲಿ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷ ಒಳ್ಳೆಯದೇ ಆದರೆ ಪಕ್ಷದಲ್ಲಿರುವ ನಾಯಕರು ಒಳ್ಳೆಯವರಲ್ಲ. ಎಲೆಕ್ಷನ್ ವೇಳೆ ನಮ್ಮನ್ನೆಲ್ಲಾ ವೋಟ್ ಬ್ಯಾಂಕ್ ಮಾಡಿಕೊಂಡರೆ ವಿನಃ ಇದುವರೆಗೂ ನಮ್ಮ ಕೆಲಸಗಳು ಮಾಡಿಕೊಡಲಿಲ್ಲ. ಕಾಲು ಕಸವಾಗಿ ಮಾಡಿ ಬಿಟ್ಟರು. ಚೆನ್ನಾಗಿ ಮಾತನಾಡಿಸಿ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದರು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಒಳ್ಳೆ ಮನಸ್ಸಿರುವ, ಮುಂದೊಂದು ದಿನ ನಮಗೆಲ್ಲಾ ಒಳ್ಳೆಯದನ್ನು ಮಾಡುತ್ತೇನೆ ಎಂದು ಭರವಸೆ ನೀಡಿರುವ ಟಿ.ಮಂಜುನಾಥ್ ಅವರನ್ನು 2023ರ ಚುನಾವಣೆಯಲ್ಲಿ ಬೆಂಬಲವಾಗಿ ನಿಂತು ಗೆಲ್ಲಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಎಲ್ಲರೂ ಒಕ್ಕಲಿರುಳಿನಿಂದ ತಿಳಿಸಿದರು.
ಪಕ್ಷೇತರ ಅಭ್ಯರ್ಥಿ ಟಿ.ಮಂಜುನಾಥ್ ಮಾತನಾಡಿ, ಪಕ್ಷ ತೊರೆದು ನನ್ನ ಜೊತೆ ಬಂದಿದ್ದೀರಾ. ಮುಂದಿನ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ನಿಷ್ಟರಾಗಿ ದುಡಿಯಿರಿ ನಿಮ್ಮ ಜೊತೆ ಸದಾ ನಾನಿರುತ್ತೇನೆ ಎಂದು ಹೇಳಿದ ಅವರು,
ಗ್ರಾಮಾಂತರದಲ್ಲಿ ಬಿಜೆಪಿಯಲ್ಲಿ ಉಸಿರುಕಟ್ಟುವ ವಾತಾವರಣದಿಂದ ಅನೇಕ ಮಂದಿ ಪಕ್ಷವನ್ನು ತೊರೆದು ನನ್ನ ಜೊತೆ ಕೈಜೋಡಿಸುತ್ತಿದ್ದಾರೆ. ಇನ್ನೂ ಅನೇಕರು ಕೂಡ ನನ್ನ ಸಂಪರ್ಕದಲ್ಲಿದ್ದು, ಅತೀ ಶೀಘ್ರದಲ್ಲಿ ನನ್ನ ಜೊತೆ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಪಿ ಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ, ನರಸಿಂಹಮೂರ್ತಿ, ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
[t4b-ticker]
+ There are no comments
Add yours