ಚಳ್ಳಕೆರೆ-17 ಚಿತ್ರರಂಗದಲ್ಲಿ ಪುನಿತ್ ರಾಜಕುಮಾಕು ಮಾಡಿರುವ ಸಾಧನೆ ಜಗಮೆಚ್ಚುವಂತಹದ್ದು. ಅವರ ಸಾಧನೆ, ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಅಪ್ಪು ಯುವ ಬ್ರಿಗೇಡ್ ವತಿಯಿಂದ ಬುಧವಾರ ಬಿಎಂ ಸರ್ಕಾರಿ ಪ್ರೌಢಶಾಲೆ ಹಿಂಭಾಗದ ಪಿವಿಟಿಸಿ ಕೇಂದ್ರದ ಬಳಿ ಅಪ್ಪು ಅಭಿಮಾನಿಗಳಿಗೆ ಶ್ರದ್ದಾಂಜಲಿ ಸಭೆ, ರಕ್ತದಾನ ಶಿಬಿರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಿರುವಯಸ್ಸಿನಲ್ಲೇ ಅಮೋಘ ಸಾಧನೆಯನ್ನು ಮಾಡಿಸಾವಿರಾರು ಅನಾಥ ಮಕ್ಕಳಿಗೆ ಶಿಕ್ಷಣದ ಸೌಲಭ್ಯವನ್ನು ನೀಡಿದ್ದಲ್ಲದೆ, ಚಿತ್ರರಂಗದ ಹಲವಾರು ಕಿರುತೆರೆ ನಟರಿಗೆ ಚೈತನ್ಯ ತುಂಬಿದಂತಹ ಪ್ರಭಾವ ಶಾಲಿ ನಟರಾದ ಪುನಿತ್ರಾಜ್ಕುಮಾರ್ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಇಂತಹ ಮಹಾನ್ ವ್ಯಕ್ತಿ ಮತ್ತೊಮ್ಮೆ ಹುಟ್ಟಿಬರಲೆಂದು ಶುಭ ಹಾರೈಸುತ್ತಾ ಅವರ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡಿದರು. ಸ್ಥಾಯಿ ಸಮಿತಿ ಸದಸ್ಯ ಬಿ.ಟಿ.ರಮೇಶ್ ಗೌಡ,
ನಗರಸಭಾ ಸದಸ್ಯ ವೀರಭದ್ರಪ್ಪ ಬಿಜೆಪಿ ಮುಖಂಡ ಟಿ.ಮಂಜುನಾಥ, ಉಮೇಶಚಂದ್ರ ಬ್ಯಾನರ್ಜಿ, ಚಂದ್ರು, ಬೇಕರಿ ವಿಜಯ್, ತಿಪ್ಪೇಸ್ವಾಮಿ ಮುಂತಾದವರು ಇದ್ದರು.
+ There are no comments
Add yours