ನೂತನ NGO ಕಾರ್ಯ ಶ್ಲಾಘನೀಯ-ಡಿಡಿಪಿಐ ರವಿಶಂಕರ್ ರೆಡ್ಡಿ

 

ನೂತನ NGO ಕಾರ್ಯ ಶ್ಲಾಘನೀಯ-DDPI –
-ರವಿಶಂಕರ್ ರೆಡ್ಡಿ

ಚಿತ್ರದುರ್ಗ ತಾಲ್ಲೂಕು ಸಿದ್ದಾಪುರ ನೂತನ ಸಂಸ್ಥೆವತಿಯಿಂದ ದಿನಾಂಕ 21-6-2021 ರಂದು ಸೋಮವಾರ ಸಂಜೆ 4-30ಕ್ಕೆ
ಚಿತ್ರದುರ್ಗ ಪತ್ರಿಕಾ ಭವನದಲ್ಲಿ
ಮನೆ ಕೆಲಸ ಮಾಡುವಂತಹ ಮಹಿಳೆಯರು,ಕೂಲಿ ಕೆಲಸ ಮಾಡುವವರು,ಅಲೆಮಾರಿ ಬುಡ್ಗ ಜಂಗಮ,ಅಲ್ಪಸಂಖ್ಯಾತ ಬಡ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.

ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರವಿಶಂಕರ್ ರೆಡ್ಡಿ ಅವರು .ಬಡವರು,ನಿರ್ಗತಿಕರು,ಶೋಷಿತರನ್ನು ಗುರುತಿಸಿ ಸಂಕಷ್ಟದ ಕಾಲದಲ್ಲಿ ನೆರವು ನೀಡುವ ಕೆಲಸ ಮಾಡಿರುವ ನೂತನ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕೋವಿಡ್ 19,ಕೊರೋನಾ ಸಂಕಷ್ಟದ ಕಾಲದಲ್ಲೂ ಬಡವರಿಗೆ ಸಹಾಯ ಹಸ್ತ ಚಾಚುವ ಕೆಲಸವು ಪುಣ್ಯದ ಕೆಲಸವಾಗಿದೆ ಎಂದು ನುಡಿದರು.

ಕೊರೋನಾದಂತಹ ಕಷ್ಟದ ಕಾಲದಲ್ಲಿ ಪುಣ್ಯದ ಕೆಲಸ ಮಾಡುತ್ತಿರುವಂತ ರಘು ಅವರನ್ಮು ಸದಾ ಸ್ಮರಿಸಬೇಕೆಂದು ಹೇಳಿದರು.

ನೂತನ ಸಂಸ್ಥೆಯ ಅಧ್ಯಕ್ಷರಾದ ರಘು(ರಾಘವೇಂದ್ರ ) ಅವರು ಮಾತನಾಡಿ ನೂತನ NGO ವತಿಯಿಂದ ಈಗಾಗಲೇ ಸಾವಿರಾರು ಕುಟುಂಬಗಳಿಗೆ ಆಹಾರ) ರೇಷನ್ ಕಿಟ್ ವಿತರಣೆ ಮಾಡಲಾಗಿದ್ದು.ಮುಂದಿನ ದಿನಗಳಲ್ಲಿ ಯಾರಾದರೂ ಕಷ್ಟದಲ್ಲಿರುವ ಮಾಹಿತಿ ಲಭ್ಯವಾದರೆ ಅಂತಹವರಿಗೂ ಸಹಾಯ ಮಾಡಲಾಗುತ್ತದೆ ಎಂದು ನುಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಬಡವರು’ಅಸಹಾಯಕರು ಸಂಕಷ್ಟದಲ್ಲಿದ್ದಾಗ ನೆರವು ನೀಡುವಂತವರು ಮಾನವೀಯತೆಯನ್ನುಮೇರದವರು ಅಂತಹ ಕೃೆಂಕಾರ್ಯವನ್ನು ನೂತನ NGO ಅಧ್ಯಕ್ಷರಾದ ರಾಘವೇಂದ್ರ ಅವರು ಮಾಡಿದ್ದಾರೆ. ಆಕಾರಣಕ್ಕಾಗಿ ಅವರು ಸಮಾಜದಲ್ಲಿ ಅತಿ ಹೆಚ್ಚು ಪ್ರೀತಿ,ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ರೇಷನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೆಚ್ .ಲಕ್ಷ್ಮಣ್ ,ಪರಿವರ್ತನಾ ಫೌಂಡೇಶನ್ ಅಧ್ಯಕ್ಷರಾದ ಕಾರ್ತಿಕ್,ಕರ್ನಾಟಕ ಗೃಹ ಅಸಂಘಟಿತ ಕಾರ್ಮಿಕರ ಸಂಘಟನೆ ಲೀಡರ್ ಗಳಾದ ಶ್ರೀಮತಿ ಗಂಗಮ್ಮ,ಶ್ರೀಮತಿ ಶಾರದಮ್ಮ ಮುಂತಾದವರು ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours